Skip to main content

Posts

Showing posts from March, 2024

" ಪೂಚಂತೇ ಗ್ರೇಟ್ ಯಾಕಂತೆ? " - By Nagesh Hegde (Noted Environmentalist and Journalist)

ತೇಜಸ್ವಿಯವರ ಮೇಲಿನ ಪ್ರೀತಿಯಿಂದ ಮತ್ತು ನಾಗೇಶ್ ಹೆಗ್ಡೆಯವರ ಮೇಲಿನ ನಂಬಿಕೆಯಿಂದ ಈ ಕೃತಿಯನ್ನು ಓದಲು ಮೊದಲಿಟ್ಟೆ. ಈ ಇಬ್ಬರ ಆಲ್ಮೋಸ್ಟ್ ಎಲ್ಲ ಕೃತಿಗಳನ್ನು ಓದಿರುವೆನಾದರೂ ಪ್ರತಿ ಹೊಸ ಕೃತಿಯಲ್ಲೂ ಕಾಣುವುದು ಆಳವಾದ ಅಧ್ಯಯನ, ಚಿಕಿತ್ಸಕ ಗುಣ,ಸಂಶೋಧಕನ ಶಿಸ್ತು, ಮಗುವಿನ ಬೆರಗು, ಪರಿಣಾಮಕಾರಿ ಸಂವಹನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸುತ್ತ ಮುತ್ತಲಿನ ಪ್ರಕೃತಿ, ಪ್ರಾಣಿ, ಪಕ್ಷಿ, ಜನರ ಮೇಲನ ಆಗಾದ ಪ್ರೀತಿ. ಪಶ್ಚಿಮ ಘಟ್ಟಗಳ ಮಹತ್ವದಿಂದ ಹಿಡಿದು ನಮ್ಮ ಸುತ್ತಮುತ್ತಲಿನ ಚಿಟ್ಟೆ, ಕೀಟ, ಹೂವು, ಉರಗ, ಓತಿ, ವಿಕಾಸ, ಅರಣ್ಯ ಸಂರಕ್ಷಣೆ, ಆ ಡಿಪಾರ್ಟ್ಮೆಂಟ್ ನ ಕಾರ್ಯವೈಖರಿ, ತಾತ್ಸಾರ, ಗಾಡ್ಗಿಲ್ ಸಮಿತಿ, ಕಸ್ತೂರಿರಂಗನ್ ಸಮಿತಿಗಳ ವರದಿ, ಅಣಬೆ, ಆರ್ಕಿಡ್, ಆಹಾರ ಸರಪಳಿ, ಜಾಗತಿಕ ಹವಾಮಾನ ವ್ಯತ್ಯಯ, ತಾಪಮಾನ ಹೇರಿಕೆ, ಜಲಪಾತಗಳು, ಒಂದೇ ಎರಡೇ? ಎಲ್ಲವೂ ಮನುಷ್ಯ ಕೇಂದ್ರಿತ ಆಗಿಬಿಟ್ಟಿರುವಾಗ (Anthropology ) ನಾವು ಮಾಡುತ್ತಿರುವ ಪ್ರತಿ ಕೆಲಸ, ಚಟುವಟಿಕೆ ಅದರಲ್ಲೂ ಔದ್ಯಮಿಕ ಕ್ರಾಂತಿಯ (industrial revolution) ಮತ್ತು ಅದರ ನಂತರದ ಅಂಧ / ರಾಶಿ ರಾಶಿ ಉತ್ಪಾದನೆ (mass production), ಸಂಪನ್ಮೂಲಗಳ ಅತಿಯಾದ ದುರ್ಬಳಕೆ ಇವೆಲ್ಲವೂ ಭೂಮಿಯ ಮೇಲೆ ಕೋಟ್ಯಾ0ತರ ವರ್ಷಗಳ ಮೇಲೆ ಮೊದಲಬಾರಿ ನಮ್ಮಿಂದ ವ್ಯತ್ಯಯ ಆಗುತ್ತಿರುವುದು ಸಾರ ಸಗಟಾಗಿ ಸಾಬೀತಾಗಿದೆ (Anthropocene). ಮನುಷ್ಯ ಮರದ ಕೊಂಬೆಯ ಮೇಲೆಯೇ ನಿಂತು ಅದನ್ನೇ ಕಡಿಯು...

ಕುತ್ಲೂರು ಕಥನ - Naveen Soorinje

ನಮಗೆ ಗೊತ್ತಿಲ್ಲದ, ಗೊತ್ತುಮಾಡಿಕೊಳ್ಳಲು ಸುಲಭವಾಗಿ ಆಗದ, ಸೊ ಕಾಲ್ಡ್ ನಾಗರೀಕ ಸಮಾಜದಿಂದಾಚೆಗೆ ತಮ್ಮಷ್ಟಕ್ಕೆ ತಾವಂತೆ ಇರುವ ನಮ್ಮದೇ ಜನಗಳ ಬಗ್ಗೆ ಒಂದು organised ವ್ಯವಸ್ಥೆಗೆ ಇರುವ ಅಸಹನೆ, ಅಸಡ್ಡೆ ಮತ್ತು ಪೂರ್ವಾಗ್ರಹಗಳು ಮತ್ತು ಅದನ್ನು ಬಗ್ಗುಬಡಿಯಲು, ಅದು ಆಗದಿದ್ದರೆ ಅವರನ್ನು ತಮ್ಮ ಕಾಲಡಿಯಲ್ಲಿ ಇಟ್ಟುಕೊಳ್ಳಲು ಹುಡುಕಿಕೊಳ್ಳುವ ಮಾರ್ಗಗಳು ಇವೆಲ್ಲಾ ನಮ್ಮನ್ನು ಬೆಚ್ಚು ಬೀಳಿಸುವಂತದ್ದು! ಕಾಡು ನಾಡನ್ನ ಮತ್ತು ಎಲ್ಲ ಮನುಷ್ಯರನ್ನ ತಾಯಿಯಂತೆ ಪೊರೆಯುತ್ತದೆ. ಕಾಡಿನ ಜೊತೆಗೇ ಅನಾಧಿಕಾಲದಿಂದಲೂ ಒಟ್ಟುಗೊಂಡಿರುವ ಕಾಡಮಕ್ಕಳು ಅದಕ್ಕೆ ಯಾವತ್ತೂ ದ್ರೋಹ ಬಗೆಯರು ಜೊತೆಗೆ ಅವರ ಇತಿಮಿತಿಯಲ್ಲಿ ಅದನ್ನು ಆಶ್ರಯಿಸುತ್ತಾರೆ ಕೂಡ. ಅದನ್ನು ಬೇಡವೆನ್ನಲು ತಡೆಯಲು ನಾವ್ಯಾರು? ನಾವು ನೀರಿಗಾಗಿ ಸಾವಿರಾರು ಅಡಿ ಪೈಪ್ ಗಳನ್ನು ಇಳಿಸಿ ಬೋರುಗಳನ್ನು ಕೊರೆದಾಗ, ಕೆರೆಗಳನ್ನು ಲೇಕ್ ವ್ಯೂ ಅಪಾರ್ಟ್ಮೆಂಟ್ ಗಳನ್ನಾಗಿ ಮಾಡಿದಾಗ, ಗಾಳಿ ನೀರನ್ನು, ಮಣ್ಣನ್ನು ಕಲುಷಿತಗೊಳಿಸಿದಾಗ ಇನ್ನೂ ಅದರ ಹಕ್ಕನ್ನು ಯಾಕೆ ಉಳಿಸಿಕೊಂಡಿದ್ದೇವೆ? ಕಾಡಜನರು ಸಾವಿರಾರು ವರ್ಷಗಳಿಂದ ಆಶ್ರಯಿಸಿದ ಕಾಡುತ್ಪತ್ತಿಯನ್ನು ಹೇಗೆ ತಪ್ಪಿಸುವ ಮನಸ್ಸು ಬರುತ್ತದೆ? ಅವರನ್ನು ಹೇಗೆ ನಕ್ಸಲ್ ಗಳನ್ನಾಗಿ ಅನುಮಾನಿಸಿ ಅದರ ಕೂಪಕ್ಕೆ ನಾವೇ ತಳ್ಳುತ್ತೇವೆ? ಇದೆಲ್ಲವನ್ನು ಓದಿದರೆ, ನೋಡಿದರೆ ಭಯವಾಗುತ್ತದೆ. ಇದು ಎಷ್ಟು ವ್ಯಾಪಾಕವಾಗಿ, ಅವ್ಯಾಹತವಾಗಿ ಮತ್ತು ಹಾಡಹಗಲೇ ನೆಡೆಯುತ್ತ...

Kunigal to kandhahar - Manjunath Kunigal

  ಕುಣಿಗಲ್ಲಿನ ಕಾಬೂಲಿವಾಲ.... ಈ ಕೃತಿ ತನ್ನ ಹೆಸರಿನಿಂದಲೇ ನನ್ನನ್ನು ಆಗಾಗ ಓದಲು ಪ್ರಚೋದಿಸುತ್ತಿತ್ತು. ಕೊಂಡ ಒಂದು ಪುಸ್ತಕವನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟೆ. ನಂತರ ಕೊಂಡದ್ದನ್ನು ನೆನ್ನೆ ಸಂಪೂರ್ಣ ಓದಿ ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು ಈ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಬೇಕು, ಹೆಚೆಚ್ಚು ಜನರಿಗೆ ತಲುಪಬೇಕು, ಕಾರಣ ಇಲ್ಲಿರುವ ವಿಶಿಷ್ಟ, ವಿಕ್ಷಿಪ್ತ ಅನುಭವಗಳು. ಮಿಲಿಯನ್ ಗಟ್ಟಲೆ ಡಾಲರ್ ಹಣ ತೆತ್ತರೂ ಈ ಅನುಭವ ನಮಗೆ ಸಿಗುವುದಿಲ್ಲ. ತಾಲಿಬಾನಿನಂತಹಾ ಗೆರಿಲ್ಲ ಪಡೆ ಇತ್ತೀಚೆಗೆ ಶಕ್ತ ರಾಷ್ಟ್ರಗಳಾದ ಅಮೇರಿಕಾ, ನೆಟೋ ಪಡೆ, ಶೀತಲ ಸಮರದಲ್ಲಿ mighty ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದೆ. ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿಯಲು ಬಹುಪಾಲು ಇವರೆಲ್ಲಾ ಸೇರಿ ಸಫಲವಾಗಿಲ್ಲ... ಅದಕ್ಕೆ ಕಾರಣ ಏನು? ವಿಶ್ವದ ನಾನಾ ಕಡೆಗಳಿಂದ ಬಂದ ಜನರು ಇಲ್ಲೇಕೆ ಕೆಲಸ ಮಾಡುತ್ತಾರೆ? ಮಿಲಿಟರಿ ಕ್ಯಾಂಪ್ನಲ್ಲಿ ಏಕೆ ಮತ್ತು ಹೇಗೆ ಇರುತ್ತಾರೆ? ಅವರ ತಳಮಳಗಳೇನು? ಅವಶ್ಯಕತೆಗಳೇನು? ಯಾರು ಇವನ್ನೆಲ್ಲಾ ಯಾವ ಕಾರಣಕ್ಕೆ ಹೇಗೆ ನಡೆಸುತ್ತಾರೆ? ಇದರಲ್ಲಿ ಕಾರ್ಪೊರೇಟ್ಗಳ ಹಾಗು ಸರ್ಕಾರಗಳ ಪಾತ್ರವೇನು? ಅಲ್ಲಿಗೆ ತಮ್ಮ ದೇಶದಿಂದ freedom ಡಿಫೆಂಡ್ ಮಾಡಲು ಬರುವ ಯೋಧರು ನಿಜವಾಗಿ ಯಾರ ಸ್ವಾತಂತ್ರ್ಯವನ್ನ ಡಿಫೆಂಡ್ ಮಾಡುತ್ತಾರೆ? ಇದರಿಂದ ಯಾರಿಗೆ ಲಾಭವಾಗುತ್ತದೆ? ಸಾಮಾನ್ಯ ಪ್ರಜೆಗೆ ಇದೆಲ್ಲಾ ಹೇಗೆ ತಟ್ಟುತ್ತದೆ? ಹೀಗೆ ಹಲವಾರು ಸಂಗತಿಗಳ...

"Moonshot" - Albert Bourla (CEO - Pfizer)

  Right from the birth, one thing which we can’t avoid are vaccines ! They have in modern times become ubiquitous and vital in serving humanity. Yet, when nature strikes hard man loses his balance or grip in the survival fight. This is evident in many catastrophes in the olden times which swept us fair and square and man overcame every time by his persistence and ingenuity to avoid them the next time when it is repeated. The more recent of such catastrophes can’t be bigger than COVID-19 which affected people across the world equally killing few millions and affecting hundreds of millions ! Though we were not prepared for such an event somewhere in our senses we were expecting something like it always, thanks to ever expanding human desires for more and more material things at the cost of nature and other beings in the chain. This book personifies the power of science, collaboration, ingenuity, speed, capitalism and more importantly question of survival which led to finding a mRNA b...

75 years of Indian Economy - Sanjay Baru

  Indian economy went through a lot of ups and downs in the past 75 years because of the shift in ideologies and hence rapid policy changes. Nevertheless, we have come a long way from socialistic command and control policy making to "License permit and quota raj" to the most recent market facing liberal set of policies post 1991. Every policy shift till 1991 was driven by domestic issues and requirements rather than aspirations and export facing interests. This is majorly due to colonial hangover after getting looted for 200 years and a close affinity towards the soviet model and its welfare state concept! This book by Mr. Sanjay Baru is a simple introduction of all that happened in Indian economy over past century, the rationale for it and the implications thus. Its a page turner with no troubling graphs and complex data dump! This is for any layman who is interested in the India's economic Journey, the factors, people and conditions which influenced it.

"ಮಾಕೋನ ಏಕಾಂತ" - ಕಾವ್ಯ ಕಡಮೆ

  ಇಲ್ಲಿರುವುದು ಹಲವು ನಿಜಗಳನ್ನು, ಸಾಧ್ಯತೆಗಳನ್ನು, ಸ್ವರೂಪವನ್ನು ಬಿಂಬಿಸುವ ಕಥೆಗಳು. ಭಾವಕ್ಕಿಂತಾ ಬುದ್ಧಿಗೆ ನಿಲುಕುವಂಥವು.ಕೆಲವು ವಾಸ್ತವಕ್ಕೆ ತೀರಾ ಹತ್ತಿರವಿದ್ದರೆ ಹಲವು ಮಾಯಾವಾಸ್ತವದ ಬಗೆಯವು. ಪ್ರತಿ ಕಥೆಯೂ ಓದುಗನ ಮನದೊಳಗೆ ಮತ್ತೊಂದು ಕಥೆಯನ್ನು ಕಥನವನ್ನು ಹುಟ್ಟಿಸುತ್ತದೆ. ಒಟ್ಟಿನಲ್ಲಿ ಎಲ್ಲ ಕಥೆಗಳೂ ಓದುಗನನನ್ನು ಬೆರಗುಗೊಳಿಸಿ ಅವನ ಕಣ್ಮನಗಳಲ್ಲಿ ಮಿಂಚ ಹೊತ್ತಿಸುತ್ತವೆ. ಇಲ್ಲಿ ನಮಗೆ ದೂರದ ಲೋಕವೊಂದರ ಕಥನಗಳು ಸಿಕ್ಕುತ್ತವೆಯಾದರೂ ಇಲ್ಲಿ ಸುಳಿದಾಡುವ ಯಾವ ಪಾತ್ರ, ಸನ್ನಿವೇಶ ಮತ್ತು ಪ್ರಹಸನವೂ ಅಪರಿಚಿತವಾದುದಲ್ಲ. ಆದರೂ ಇವು ಸುಲಭಕ್ಕೆ ನಿಲುಕುವ ಮತ್ತು ಜೀರ್ಣವಾಗುವ ಕಥೆಗಳಲ್ಲ.

"ಬದುಕು ಜಟಕಾ ಬಂಡಿ" - Ananta Kunigal

  ಪ್ರಿಯ ಅನಂತ ಬದುಕು ಜಟಕಾ ಬಂಡಿ ಕಥೆಗಳನ್ನು ಓದಿದೆ. ನಿನ್ನ ಜೀವನ ಪ್ರೀತಿ, ಬರೆಯಬೇಕೆಂಬ ಹಂಬಲ, ಬರೆದೇ ತೀರಬೇಕೆಂಬ ಛಲ, ಪ್ರಾಮಾಣಿಕತೆ ಮತ್ತು ಕಥನ ರೀತಿಯನ್ನು ಕಂಡು ಖುಷಿಯಾಯ್ತು. ಮೇಟ್ಕುಳಿ, ಸರದಿ, ಬೋರೇಗೌಡ, ವಿಸರ್ಜನೆ, ಬಯಲ ತೊರೆದ ಹಾಡು, ದೇಹದೇಗುಲ ಮುಂತಾದ ಕಥೆಗಳು ಇಷ್ಟವಾದವು. ವಿಶೇಷವಾಗಿ 'ಮೇಟ್ಕುಳಿ' ಮತ್ತು 'ಸರದಿ' ಕಥೆಗಳು ನನ್ನನ್ನು ಸೆಳೆದವು. ಬರವಣಿಗೆಯ ಬಗ್ಗೆ ಸ್ವಲ್ಪ ಜಿಪುಣನಾಗು. ಹಲವು ಕಡೆ, ಹೇಳುವುದನ್ನು ನೇರ ಹೇಳಬಹುದಿತ್ತು ಅನ್ನುವುದನ್ನು ಬಿಟ್ಟರೆ Kusuma Ayarahalli ಮುನ್ನುಡಿಯಲ್ಲಿ ಹೇಳಿದಹಾಗೆ ಬರೆಯಬೇಕೆಂದೆನಿಸುವುದು , ಬರೆಯುವುದು ಮುಖ್ಯ. ಅದನ್ನು ಮುಂದುವರೆಸು....

Hiroshima by John Hersey

  If 'Oppenheimer' was about how the atoms were turned into a deadly bomb... Hiroshima by "John Hersey" is all about that devastation, how it killed more than a lakh people injuring more than another lakh mostly permanently! Out of 2.5 lakh inhabitants only about 30 to 40 thousand survived with no major injuries. The Japanese called them as 'HIBAKUSHA', the atomic bomb affected people. They never accepted to call them as survivors as that would imply luck and the Japanese dint want to distinguish those who survived and those who din't, based on that. A story told interms of the lives of six people, 2 doctors, a Reverend, a catholic priest, a housewife and a factory clerk woman, 40 years apart after the first atomic bomb exploded on hiroshima on 6th august 1945 was regarded as the fine piece of journalism where the story was narrated in a non-passionate way by focussing on the victim rather than author's views, prejudices, political affiliations etc. Th...

"The Stranger" by Albert Camus

  ಆಲ್ಬರ್ಟ್ ಕಾಮು ಬರೆದ "The Stranger" ಕಾದಂಬರಿಯನ್ನು ಓದಿ ನಿಬ್ಬೆರಗಾದೆ. ಅವನ ಮೊದಲ ಕಾದಂಬರಿ ಇದಂತೆ. ಇಲ್ಲಿನ ಸರಳ ನಿರೂಪಣೆಯಲ್ಲಿ ಕಾದಂಬರಿ ಓದಲಿಕ್ಕೆ ಸರಳವಾದರೂ ಇಲ್ಲಿನ ವಿಷಯ ವಿಕ್ಷಿಪ್ತ. ವಸ್ತು ಗಹನವಲ್ಲವಾದರೂ ಇಲ್ಲಿನ ಮುಖ್ಯ ಪಾತ್ರದಾರಿಯ ನಡವಳಿಕೆ ಮತ್ತು ನಂಬಿಕೆಗಳೇ ವಿಚಿತ್ರ ಮತ್ತು ನಮಗೆ ಪರಿಚಿತವಲಯದಿಂದ ಬಹಳ ದೂರ... ಇದನ್ನು ಇಂಗ್ಲಿಷ್ನಲ್ಲಿ ಕೆಲವರು " The Outsider " ಅಂತಲೂ ಅನುವಾದಿಸಿದ್ದಾರೆ.

Hellen Keller - A photographic story of a life by Leslie Garrett

  Hellen keller and her inventive teacher for life Annie Sullivan who taught her how to read, write, understand and express despite being blind and deaf, her caring mother and supportive father Alexander graham bell her friend and well wisher for life, her dedication, stubbornly attitude towards life long learning leading to mastery of 4 languages, her challenging journey to harvard (Radcliffe college for women) , many many books, lecturings tours, being a socialist, tenderness towards poor and needy, pity towards rich capitalists who did very little alleviate the pain of the needy, her campaign to make lives of physically challenged better by persuading several presidents to take action, her dependency, vulnerability, yearning for true love and letting go of Annie.... All makes her biography exemplary and much more!

ನೆನಪಿನ ಪುಟಗಳ - T N Seetharam

  ಗುರುಗಳನ್ನ ಒಮ್ಮೆ ಭೇಟಿ ಮಾಡಿದಾಗ ಒಂದು ಮಾತನ್ನು ಹೇಳಿದ್ದರು, ಅದು " ವಯಸಾಗುತ್ತಿದೆ! ಎಲ್ಲವನ್ನೂ ಮಾಡಲು ಹೊರಡುವುದು ಉಚಿತವಲ್ಲವಾದ್ದರಿಂದ ಒಂದು ಅಥವಾ ಎರಡು ಧಾರಾವಾಹಿ, ಒಂದು ಚಲನಚಿತ್ರ ಮತ್ತು ತಮ್ಮ ಬದುಕಿನ ನೆನಪುಗಳನ್ನು ಪುಸ್ತಕ ರೂಪದಲ್ಲಿ ತರಬೇಕು " ಎನ್ನುವುದು. ಅದಾದಮೇಲೆ ಎರಡು ಮೂರು ಧಾರಾವಾಹಿಗಳನ್ನು ಮಾಡಿದರು. ಕರ್ನಾಟಕದ ರಾಜಕೀಯವನ್ನ ಕುರಿತ ಸಾಕ್ಷಚಿತ್ರ ಶುರುಮಾಡಿ ಅದೇಕೋ ಕೆಲವೇ ಕಂತುಗಳಿಗೆ ನಿಲ್ಲಿಸಿಬಿಟ್ಟರು ಎಂಬ ನೆನಪು. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಅದರ ವ್ಯವಹಾರಕ್ಕೆ ಹೋಗದಿರುವುದೇ ಒಳಿತೆಂದು ಸುಮ್ಮನಾದರು ಅಂದುಕೊಂಡೆ. ಈಗ ಉಳಿದಿದ್ದು ಅವರ 'ಆತ್ಮಕತೆ '. ಅದರ ನಿರೀಕ್ಷೆಯಲ್ಲಿದ್ದೆ.... ಈಗ ಅದು ' ನೆನಪಿನ ಪುಟಗಳು ' ಎಂಬ ಅತ್ಯಂತ ಸೂಕ್ತವಾದ ಹೆಸರಿನಲ್ಲಿ ಸಾಕಾರಗೊಂಡಿದೆ. ಒಬ್ಬ ಮನುಷ್ಯ ಇಷ್ಟು ರಂಗಗಳಲ್ಲಿ ಕ್ರಿಯಾಶೀಲರಾಗಿರುವುದು ಸಾಧ್ಯವಾ? ಅದೂ ಒಂದಕ್ಕೊಂದು ಸಂಭಂದವೇ ಇಲ್ಲದ ರಂಗಗಳಲ್ಲಿ? ಅದೂ ತಮ್ಮ ಆದರ್ಶಗಳನ್ನು ಜೀವನ ಪೂರ್ತಿ ಪಾಲಿಸುತ್ತಾ, ಪರರ ಹಣ ಪಾಶಾಣ ಎಂಬುದನ್ನು ನಂಬಿ? ರಾಜಕೀಯ, ಸಾಹಿತ್ಯ, ನಾಟಕ, ಕೃಷಿ, ಲಾಯರಿಕೆ, ನಟನೆ, ನಿರ್ದೇಶನ, ನಿರ್ಮಾಣ....... ಅಬ್ಬಬ್ಬಾ ಅನ್ನಿಸುವಂತೆ! ಗುರುಗಳ ನೆನಪಿನ ಪುಟಗಳನ್ನು ಓದುತ್ತಿದ್ದರೆ ಒಂದು ಆತ್ಮೀಯ ಭಾವ ನಮ್ಮನ್ನು ಹಿಡಿದಿಡುತ್ತದೆ. ಬಹುಷಃ ಅದಕ್ಕೆ ಕಾರಣ ಅವರ ಸರಳ ಮತ್ತು ನೇರ ಶೈಲಿ. "ಎಲ್ಲ ಸತ್ಯವನ್ನ...

ರೌದ್ರಾವರಣo - Ananta Kunigal

  ಅನಂತ ಕುಣಿಗಲ್ ನಮ್ಮ ಜಿಲ್ಲೆಯವರು. ಹಳ್ಳಿಯಲ್ಲಿ ಬೆಳೆದು ಪೇಟೆಯಲ್ಲಿ ಬದುಕು ಕಟ್ಟಿಕೊಂಡವರು. ಇಡೀ ಸಾಹಿತ್ಯ ಬಳಗದ ಜೊತೆಗೆ ತಮ್ಮನ್ನು ಗುರುತಿಸಿಕೊಂಡಿರುವವರು. ಒಮ್ಮೆ ಪುಸ್ತಕಗಳ ವ್ಯಾಪಾರದ ಬಗ್ಗೆ ಮತ್ತು ಅದರೊಳಗಿನ ರಾಜಕೀಯದ ಬಗ್ಗೆ ಅಂಕಣ ಬರೆದಿದ್ದರು ಅದನ್ನು ಓದಿ ಇಷ್ಟು ಚಿಕ್ಕ ವಯಸ್ಸಿಗೆ (25) ಇಷ್ಟೆಲ್ಲಾ ಅರ್ಥ ಮಾಡಿಕೊಂಡಿದ್ದಾರೆ ಎಂದು ಖುಷಿ ಆತಂಕ ಆಯಿತು. ಖುಷಿ ಅವರ ತಿಳುವಳಿಕೆಯ ಬಗ್ಗೆ ಮತ್ತು ಆತಂಕ ಅದು ಅವರನ್ನು ಸಿನಿಕತನಕ್ಕೆ ದೂಡಬಹುದೇನೋ ಎಂಬುದರ ಬಗ್ಗೆ! ಇಷ್ಟೆಲ್ಲಾ ಹೇಳಿದ ಉದ್ದೇಷ ನಾನು ಓದಿದ ಅವರ ಕಾದಂಬರಿ "ರೌದ್ರಾವರಣo ". ಅವರೇ ಹೇಳುವ ಹಾಗೆ ಅದು ತನ್ನ ರೋಚಕತೆಯನ್ನ ಕಡೆಯವರೆಗೂ ಉಳಿಸಿಕೊಂಡಿದೆ ಮತ್ತು ಅದನ್ನು ಅವರ ಮುಂದಿನ ಕಾದಂಬರಿ " ಕಾಡ್ಗಿಚ್ಚಿ " ಗೂ ದಾಟಿಸಿದೆ. ಇತ್ತೀಚೆಗೆ ಏನೋ ಗಹನವಾದುದನ್ನು ಓದಲು ಹೊರಟ ಓದುಗ ಓದಿನ ಸಹಜ ಖುಷಿಯನ್ನು ಕಳೆದುಕೊಳ್ಳ ತೊಡಗಿದ್ದಾನೆ ಅಂತಹವನಿಗೆ ಈ ಕಾದಂಬರಿ ಓದಿನ ಖುಷಿಯನ್ನೂ ಜೊತೆಗೆ ಭಾರತದ ಹಳ್ಳಿಯೊಂದರ ಒಳ ಮಜಲುಗಳನ್ನೂ, ವರ್ಗ ಸಂಘರ್ಷ, ಹಾದರ, ತಿಕ್ಕಾಟ, ರಾಜಕೀಯ ಮೊದಲಾದ ಅನುದಿನದ ಅವಸ್ಥೆಯನ್ನು ಸರಳವಾಗಿ ಕಾಣಿಸುತ್ತದೆ. ಈ ಕಾದಂಬರಿ ಕಳೆದ ಬಾರಿಯ ಕೇಂದ್ರ ಸರ್ಕಾರ ಕೊಡುವ ಯುವ ಪುರಸ್ಕಾರಕ್ಕೂ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು ಎಂದು ಓದಿದ ನೆನಪು. ಅನಂತರವರು ಹೀಗೆಯೇ ಬರೆಯುತ್ತಿರಲಿ... ಅವರಿಗೆ ಎಲ್ಲ ಪುರಸ್ಕಾರಗಳೂ ಸಿಗಲಿ ಮತ್ತು ಅವ...

"ಮೀಸಳ್ ಬಾಜಿ" - B V Bharathi

  "ಮೀಸಳ್ ಬಾಜಿ" ನನ್ನ ಬಹು ಇಷ್ಟದ ತಿನಿಸುಗಳಲ್ಲಿ ಒಂದು. ಬಿ ವಿ ಭಾರತಿಯವರ ಇಲ್ಲಿನ ಪ್ರಬಂಧಗಳು ಏಕಕಾಲಕ್ಕೆ ಗಂಭೀರವೂ ಮತ್ತೆ ಓಡನೆಯೇ ತಿಳಿಹಾಸ್ಯದ ಲೇಪನ ಹೊಂದಿ ನಮ್ಮನ್ನು ಆಚೆ ಈಚೆಗೆ ಓಲಾಡಿಸಬಲ್ಲವು. ತಮ್ಮ ಕಷ್ಟ ಕೋಟಲೆಗಳನ್ನೆಲ್ಲ ಕೀಟಲೆಯನ್ನಾಗಿಸುವ (ಲೇಖಕಿ ಭುವನೇಶ್ವರಿ ಹೆಗ್ಗಡೆ ಯವರ ಬಳಕೆ) ಮತ್ತದನ್ನು ಓದುಗನಿಗೆ ಉಣಬಡಿಸುವ ಬರವಣಿಗೆ ಅವರಿಗೆ ಸುಲಭಸಾಧ್ಯ. ಅವರು ನಮ್ಮ ಸೀಮೆಯ ಸ್ವಚ್ಛ ಅರ್ಬನ್ ಕನ್ನಡವನ್ನ ಯಾವುದೇ ಹಿಂಜರಿಕೆಯಿಲ್ಲದೇ ಬಳಸುವುದು ನನಗೆ ಅತ್ಯಂತ ಅಪ್ಯಾಯಮಾನ. ಇದನ್ನು ಪುರುಷ ಅಥವಾ ಮಹಿಳಾ ಲೇಖಕರು ಅಷ್ಟು carefree ಆಗಿ (careless ಅಲ್ಲ!) ಉಪಯೋಗಿಸಿದ್ದನ್ನು ನಾನು ನೋಡಿಲ್ಲ. ಜಯಂತರು ತಮ್ಮ ಕವಿತೆಗಳಲ್ಲಿ ಇಂತಹ ಪ್ರಯೋಗ ಮಾಡುವ ಏಕೈಕ ಕವಿ ಅಂತ ವಿವೇಕ ಶಾನುಭಾಗರು ಹೇಳುತ್ತಿರುತ್ತಾರೆ. ಗದ್ಯದಲ್ಲಿ ನನಗೆ ಅದನ್ನು ಭಾರತಿಯವರು ಮಾಡುತ್ತಾರೆ ಅನ್ನಿಸುತ್ತದೆ.ಅದಕ್ಕೆ ಅವರ " ಶಿಷ್ಟಚಾರಕ್ಕೆ ಗೋಲಿ ಹೊಡಿ " ಎಂಬ ನಿಲುವು ಮುಖ್ಯ ಕಾರಣ ಅನ್ನಿಸುತ್ತದೆ! ಮೀಸಳ್ ಭಾಜಿಯಲ್ಲಿ ಅವರು ತಮ್ಮ ಬಗ್ಗೆ, ಮಗನ ಬಗ್ಗೆ, ಸ್ನೇಹಿತರ ಬಗ್ಗೆ, ಗೆಳತಿಯ ಪ್ರಿಯಕರನ ಬಗ್ಗೆ, ಗಂಡನ ಬಗ್ಗೆ,ಅವರ ಮನೆಯ ಬಗ್ಗೆ,ಅಪ್ಪ ಅಮ್ಮನ ಬಗ್ಗೆ, ಊರಿನ ಬಗ್ಗೆ, ಆಟೋ ರಾಜರ ಬಗ್ಗೆ, ಅನುದಿನದ ಕಲಾಪಗಳ ಬಗ್ಗೆ, ಭಿಡೆ ಇಲ್ಲದೆ, ಎಗ್ಗು ಸಿಗಿಲ್ಲದೆ ಗೀಚಿ ಬಿಸಾಕಿದ್ದಾರೆ ! ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿರುವು...

'ಕಾಡು' - Sri krishna aalanahalli

  'ಕಾಡು' ಓದಿದೆ. ಅಲ್ಲಿನ ಪುಟ್ಟ ಹುಡುಗ ಕಿಟ್ಟಿಯ ಮೂಲಕ ಕಥೆಯನ್ನು ನೋಡಿರುವುದರಿಂದಾ ಅದಕ್ಕೆ ಒಂದು ಮುಗ್ಧತೆ ಇದೆ. ಜೊತೆಯಲ್ಲಿ ಕುತೂಹಲ ಕೂಡ! ಇಲ್ಲಿ ಅಲನಹಳ್ಳಿ ಕೃಷ್ಣ ನಿಜವಾಗಿ ಕಥೆ ಹೇಳುತ್ತಾರೆ ಕಣ್ಣು ಕಟ್ಟುವ ಹಾಗೆ, ಮನಸ್ಸಿಗೆ ಮುಟ್ಟುವ ಹಾಗೆ, ಹೃದಯಕ್ಕೆ ತಟ್ಟುವ ಹಾಗೆ. ಗ್ರಾಮ್ಯ ಬದುಕಿನ ಸೂಕ್ಷ್ಮ ಗಳನ್ನು ಅನುದಿನದ ವಿವರಗಳನ್ನು ಸಾಮಾಜಿಕ ಪದರಗಳನ್ನು ಹೇಳುತ್ತಾ ಕಿಟ್ಟಿಯ ಸಹಜ ಕುತೂಹಲದ ಮೂಲಕ ಕಾಣುತ್ತಾ ಕಾಣಿಸುತ್ತಾ..... ನಿಜವಾಗಿ ಹೇಳುತ್ತೇನೆ ಈ ತರಹದ ಕೃತಿಗಳು ನಮ್ಮ ಭಾಷೆಯ ಬಗ್ಗೆ ನಮಗೆ ಹೆಚ್ಚು ಹೆಮ್ಮೆಯನ್ನು, ತಿಳುವಳಿಕೆಯನ್ನು, ಭರವಸೆಯನ್ನೂ ಮೂಡಿಸುತ್ತವೆ. ಅವರ ಕೃತಿಗಳೆಲ್ಲಾ ಸಿನೆಮಾ ಆಗಿದ್ದರೂ ಅವನ್ನು ನಾವು ನೋಡಿದ್ದರೂ ಅವನ್ನು ಓದುವ ಖುಷಿ ಮತ್ತು ಗಮ್ಮತ್ತೇ ಬೇರೆ ಎಂಬುದು ನನಗೆ ತಡವಾಗಿ ತಿಳಿದಿದ್ದಕ್ಕೆ ಸ್ವಲ್ಪ ಬೇಜಾರೂ ಜೊತೆಗೆ ಇನ್ನೂ ಓದದ ಕೃತಿಗಳನ್ನು ಓದುವ ಬಯಕೆಯನ್ನೂ ಏಕಕಾಲಕ್ಕೆ ಹೊಮ್ಮಿಸಿದೆ!