Skip to main content

Kunigal to kandhahar - Manjunath Kunigal

 ಕುಣಿಗಲ್ಲಿನ ಕಾಬೂಲಿವಾಲ....

ಈ ಕೃತಿ ತನ್ನ ಹೆಸರಿನಿಂದಲೇ ನನ್ನನ್ನು ಆಗಾಗ ಓದಲು ಪ್ರಚೋದಿಸುತ್ತಿತ್ತು. ಕೊಂಡ ಒಂದು ಪುಸ್ತಕವನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟೆ. ನಂತರ ಕೊಂಡದ್ದನ್ನು ನೆನ್ನೆ ಸಂಪೂರ್ಣ ಓದಿ ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು ಈ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಬೇಕು, ಹೆಚೆಚ್ಚು ಜನರಿಗೆ ತಲುಪಬೇಕು, ಕಾರಣ ಇಲ್ಲಿರುವ ವಿಶಿಷ್ಟ, ವಿಕ್ಷಿಪ್ತ ಅನುಭವಗಳು.
ಮಿಲಿಯನ್ ಗಟ್ಟಲೆ ಡಾಲರ್ ಹಣ ತೆತ್ತರೂ ಈ ಅನುಭವ ನಮಗೆ ಸಿಗುವುದಿಲ್ಲ. ತಾಲಿಬಾನಿನಂತಹಾ ಗೆರಿಲ್ಲ ಪಡೆ ಇತ್ತೀಚೆಗೆ ಶಕ್ತ ರಾಷ್ಟ್ರಗಳಾದ ಅಮೇರಿಕಾ, ನೆಟೋ ಪಡೆ, ಶೀತಲ ಸಮರದಲ್ಲಿ mighty ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದೆ. ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿಯಲು ಬಹುಪಾಲು ಇವರೆಲ್ಲಾ ಸೇರಿ ಸಫಲವಾಗಿಲ್ಲ... ಅದಕ್ಕೆ ಕಾರಣ ಏನು? ವಿಶ್ವದ ನಾನಾ ಕಡೆಗಳಿಂದ ಬಂದ ಜನರು ಇಲ್ಲೇಕೆ ಕೆಲಸ ಮಾಡುತ್ತಾರೆ? ಮಿಲಿಟರಿ ಕ್ಯಾಂಪ್ನಲ್ಲಿ ಏಕೆ ಮತ್ತು ಹೇಗೆ ಇರುತ್ತಾರೆ? ಅವರ ತಳಮಳಗಳೇನು? ಅವಶ್ಯಕತೆಗಳೇನು? ಯಾರು ಇವನ್ನೆಲ್ಲಾ ಯಾವ ಕಾರಣಕ್ಕೆ ಹೇಗೆ ನಡೆಸುತ್ತಾರೆ? ಇದರಲ್ಲಿ ಕಾರ್ಪೊರೇಟ್ಗಳ ಹಾಗು ಸರ್ಕಾರಗಳ ಪಾತ್ರವೇನು? ಅಲ್ಲಿಗೆ ತಮ್ಮ ದೇಶದಿಂದ freedom ಡಿಫೆಂಡ್ ಮಾಡಲು ಬರುವ ಯೋಧರು ನಿಜವಾಗಿ ಯಾರ ಸ್ವಾತಂತ್ರ್ಯವನ್ನ ಡಿಫೆಂಡ್ ಮಾಡುತ್ತಾರೆ? ಇದರಿಂದ ಯಾರಿಗೆ ಲಾಭವಾಗುತ್ತದೆ? ಸಾಮಾನ್ಯ ಪ್ರಜೆಗೆ ಇದೆಲ್ಲಾ ಹೇಗೆ ತಟ್ಟುತ್ತದೆ? ಹೀಗೆ ಹಲವಾರು ಸಂಗತಿಗಳು ಕೊಂಚ ಮಟ್ಟಿಗೆ ಮನದಟ್ಟಾಗುತ್ತವೆ.


ಎಲ್ಲದಕ್ಕಿಂತಾ ಹೆಚ್ಚು ಇಷ್ಟವಾಗುವುದು ಮಂಜುನಾಥ್ ಅವರ ಬರವಣಿಗೆಯ ಶೈಲಿ. ಅಲ್ಲಿ ಅತಿರೇಕ, ಅತಿಶಯೋಕ್ತಿಗಳಿಲ್ಲ. ನಮ್ಮನ್ನು ಮೆಚ್ಚಿಸುವ ಹುನ್ನಾರಗಳಿಲ್ಲ. ಆದರೆ ಓದಿನ ಒಘಕ್ಕೆ ತೊಂದರೆಯೇ ಇಲ್ಲ. ಅದಕ್ಕೆ ಕಾರಣ, ಅವರು ಎಲ್ಲವನ್ನೂ ಸ್ವಾರಸ್ಯಕರವಾಗಿ ಮತ್ತು ಪ್ರಾಮಾಣಿಕವಾಗಿ ವಿವರಿಸುವ ರೀತಿ. ಐದು ವರ್ಷಗಳಿಂದ ಸೌದಿಯೂ ಸೇರಿ ನಾನು ಸುತ್ತಿರುವ ಅನೇಕ ಅರಬ್ ರಾಷ್ಟ್ರಗಳ ಸಂಸ್ಕೃತಿಯ ಹಿನ್ನೆಲೆಯಲ್ಲಿ ಒಂದಷ್ಟು ರಿಲೇಟ್ ಮಾಡಿಕೊಳ್ಳುವ ಸಂಗತಿಗಳಿದ್ದರೂ ಮಂಜುನಾಥ್ ರವರ ಕಾರ್ಯಾನುಭವ, ಸುತ್ತಾಟ ಅಗಾಧ ಮತ್ತು ಅನನ್ಯ ಬಗೆಯದ್ದು.
ಹತ್ತು ಹದಿನೈದು ದಿನಗಳ ಕಾಲ ಕಾಶ್ಮೀರಕ್ಕೆ ಹೋಗಿ ಬಂದು ಕಥೆ ಹೊಡೆಯುವ ಮಾದರಿಯಲ್ಲ... ಹತ್ತಾರು ವರ್ಷ ಅಂತಹ ಆಯಕಟ್ಟಿನ ಮಿಲಿಟರಿ ಬೇಸ್ನಲ್ಲಿ ಕೆಲಸ ಮಾಡಿ, ಸಾವನ್ನು ಹತ್ತಿರದಿಂದ ನೋಡಿ, ಇಲ್ಲಿಗೆ ಯಾಕೆ ಬಂದೆನೋ ಎಂದು ತನ್ನನ್ನು ತಾನೇ ಶಪಿಸಿಕೊಂಡು ಆದರೂ ಮತ್ತೆ ಮತ್ತೆ ಹೋಗಬೇಕಾಗಿ ಬಂದು, ಕಡೆಗೆ ಇದನ್ನೆಲ್ಲಾ ಬರೆಯಬೇಕಾ ಎಂದು ಕೇಳಿಕೊಳ್ಳುವ ಪ್ರಾಮಾಣಿಕ ಗೊಂದಲದ ಮನಸ್ಸು ಅವರದ್ದು.
ಇದನ್ನು ಇವರು ಕನ್ನಡದಲ್ಲಿ ಬರೆಯದೇ ಹೋಗಿದ್ದರೆ ನಮಗೆ ಯುದ್ಧ ಕ್ಯಾಂಪ್ಗಳ ಎಷ್ಟೋ ವಿಷಯಗಳ ಬಗ್ಗೆ ತಿಳಿಯುತ್ತಲೇ ಇರಲಿಲ್ಲ! ಕಾರಣ ಅದರ ವಸ್ತು ವಿಷಯ, ಅವರಿಗೆ ತಮ್ಮ ಕೆಲಸದ ನಿಮಿತ್ತ ಅಲ್ಲಿ ಸಿಕ್ಕ ಅಕ್ಸಸ್ ಮತ್ತು ಅದೆಲ್ಲವನ್ನು ಗಮನಿಸಿ ಬರೆದ ಅವರ ಸೂಕ್ಷ್ಮಗ್ರಾಹಿತನ.

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ