Skip to main content

ನೆನಪಿನ ಪುಟಗಳ - T N Seetharam

 ಗುರುಗಳನ್ನ ಒಮ್ಮೆ ಭೇಟಿ ಮಾಡಿದಾಗ ಒಂದು ಮಾತನ್ನು ಹೇಳಿದ್ದರು, ಅದು " ವಯಸಾಗುತ್ತಿದೆ! ಎಲ್ಲವನ್ನೂ ಮಾಡಲು ಹೊರಡುವುದು ಉಚಿತವಲ್ಲವಾದ್ದರಿಂದ ಒಂದು ಅಥವಾ ಎರಡು ಧಾರಾವಾಹಿ, ಒಂದು ಚಲನಚಿತ್ರ ಮತ್ತು ತಮ್ಮ ಬದುಕಿನ ನೆನಪುಗಳನ್ನು ಪುಸ್ತಕ ರೂಪದಲ್ಲಿ ತರಬೇಕು " ಎನ್ನುವುದು.

ಅದಾದಮೇಲೆ ಎರಡು ಮೂರು ಧಾರಾವಾಹಿಗಳನ್ನು ಮಾಡಿದರು. ಕರ್ನಾಟಕದ ರಾಜಕೀಯವನ್ನ ಕುರಿತ ಸಾಕ್ಷಚಿತ್ರ ಶುರುಮಾಡಿ ಅದೇಕೋ ಕೆಲವೇ ಕಂತುಗಳಿಗೆ ನಿಲ್ಲಿಸಿಬಿಟ್ಟರು ಎಂಬ ನೆನಪು. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಅದರ ವ್ಯವಹಾರಕ್ಕೆ ಹೋಗದಿರುವುದೇ ಒಳಿತೆಂದು ಸುಮ್ಮನಾದರು ಅಂದುಕೊಂಡೆ. ಈಗ ಉಳಿದಿದ್ದು ಅವರ 'ಆತ್ಮಕತೆ '. ಅದರ ನಿರೀಕ್ಷೆಯಲ್ಲಿದ್ದೆ.... ಈಗ ಅದು ' ನೆನಪಿನ ಪುಟಗಳು ' ಎಂಬ ಅತ್ಯಂತ ಸೂಕ್ತವಾದ ಹೆಸರಿನಲ್ಲಿ ಸಾಕಾರಗೊಂಡಿದೆ.
ಒಬ್ಬ ಮನುಷ್ಯ ಇಷ್ಟು ರಂಗಗಳಲ್ಲಿ ಕ್ರಿಯಾಶೀಲರಾಗಿರುವುದು ಸಾಧ್ಯವಾ? ಅದೂ ಒಂದಕ್ಕೊಂದು ಸಂಭಂದವೇ ಇಲ್ಲದ ರಂಗಗಳಲ್ಲಿ? ಅದೂ ತಮ್ಮ ಆದರ್ಶಗಳನ್ನು ಜೀವನ ಪೂರ್ತಿ ಪಾಲಿಸುತ್ತಾ, ಪರರ ಹಣ ಪಾಶಾಣ ಎಂಬುದನ್ನು ನಂಬಿ? ರಾಜಕೀಯ, ಸಾಹಿತ್ಯ, ನಾಟಕ, ಕೃಷಿ, ಲಾಯರಿಕೆ, ನಟನೆ, ನಿರ್ದೇಶನ, ನಿರ್ಮಾಣ....... ಅಬ್ಬಬ್ಬಾ ಅನ್ನಿಸುವಂತೆ!
ಗುರುಗಳ ನೆನಪಿನ ಪುಟಗಳನ್ನು ಓದುತ್ತಿದ್ದರೆ ಒಂದು ಆತ್ಮೀಯ ಭಾವ ನಮ್ಮನ್ನು ಹಿಡಿದಿಡುತ್ತದೆ. ಬಹುಷಃ ಅದಕ್ಕೆ ಕಾರಣ ಅವರ ಸರಳ ಮತ್ತು ನೇರ ಶೈಲಿ. "ಎಲ್ಲ ಸತ್ಯವನ್ನೂ ಹೇಳಲು ಹೋಗುವುದಿಲ್ಲ" ಎನ್ನುತ್ತಾರೆ. ಹಾಗೆಯೇ ಅಲ್ಲಲ್ಲಿ ಓದುಗನಿಗೆ " Reading between the lines" ಗೆ ವಿಪುಲ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ! ದೊಡ್ಡವರ ಸಹವಾಸ ಬಿಸಿಲು ಕುದುರೆಯಂತೆ ಎಂಬುದನ್ನು ಹಲವು ಕಡೆ ನಿರೂಪಿಸಿದ್ದಾರೆ.

ಸ್ನೇಹಕ್ಕೆ, ಸಂಭಂದಕ್ಕೆ, ಆದರ್ಶಕ್ಕೆ, ಮನುಷ್ಯ ಪ್ರೀತಿಗೆ, ಪ್ರೊಫೆಷನಲ್ ethics ಮತ್ತು conduct ಗೆ, ನಿರಂತರ ಪ್ರಯತ್ನಕ್ಕೆ, ಬಿದ್ದಾಗೆಲ್ಲ ಏಳುವ, ಏನನ್ನಾದರೂ ಮಾಡುತ್ತಿರುವ ಹಪಹಪಿತನಕ್ಕೆ ಅವರ ಬದುಕೇ ಸಾಕ್ಷಿ.
ಈ ಪುಸ್ತಕವನ್ನು ಸಂಪೂರ್ಣ ಓದಿದಮೇಲೆ ನನಗೆ ಗುರುಗಳಂತೆಯೇ ' ನನ್ನಪ್ಪ ಕೂಡ ' ಅನ್ನಿಸುತ್ತಿದೆ.... ಆದರೆ ಕಾಲಚಕ್ರದಲ್ಲಿ ಗುರುಗಳು ನೋವು ನಲಿವು ಎಲ್ಲವನ್ನೂ ಕಂಡಿದ್ದಾರೆ, ಚಕ್ರದ ಕೆಳಗಿದ್ದವರು ಮೇಲೆ ಬಂದಿದ್ದಾರೆ... ಅಪ್ಪನಿಗೆ ಅ ಭಾಗ್ಯ ಯಾಕೋ ಬರಲಿಲ್ಲ!
ಗುರುಗಳ ಜೀವನದಲ್ಲಿ ಸಾಹಿತ್ಯದ, ಸಂಭಂಧಗಳ (ಪ್ರೀತಿ ಮತ್ತು ಪಶ್ಚತ್ತಾಪ) ಪ್ರಭಾವ ವಿಪುಲವಾಗಿದೆ. ಅದರಿಂದಲೋ ಏನೋ ಅವರ ನಾಟಕಗಳು, ಧಾರಾವಾಹಿಗಳು ಪದರ ಪದರವಾಗಿ ಮನಸ್ಸನ್ನು, ಮತ್ತು ಮನುಷ್ಯ ತಾಕಲಾಟವನ್ನು ಕೇಂದ್ರವಾಗಿ ಇರಿಸಿಕೊಂಡಿವೆ ಅನ್ನಿಸುತ್ತದೆ.
ಕಳೆದ 50 -60 ವರ್ಷಗಳ ರಾಜಕೀಯ, ಸಾಂಸ್ಕೃತಿಕ, ಸಾಹಿತಿಕ ಮತ್ತು ಜನಜೀವನದ ಚಿತ್ರಣಕ್ಕೆ ಈ 'ಪುಟಗಳು ' ಸೂಕ್ತ ಸಂಗಾತ ಒದಗಿಸುತ್ತವೆ. ಎಲ್ಲರಂತೆ ನಾನೂ ಇದರ ಮುಂದಿನ ಆವೃತ್ತಿಗಾಗಿ ಕಾಯುವೆ 🙏

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ