ಮಂದಣ್ಣನನ್ನ ನೆನೆದಾಗಲೆಲ್ಲಾ ನನಗೆ ನಮ್ಮಪ್ಪನೇ ನೆನಪಾಗುತ್ತಾರೆ. ಅದನ್ನು ವಿಸ್ತೃತವಾಗಿ ನನ್ನ “ ಅಪ್ಪನ rallys ಸೈಕಲ್ “ ಪ್ರಬಂಧಗಳಲ್ಲಿ ಬರೆದ್ದಿದ್ದೇನೆ. ಆದರೆ ತೇಜಸ್ವಿಯವರ “ಕರ್ವಾಲೋ” ದ ಮಂದಣ್ಣ ಆ ಪುಸ್ತಕದ/ ಕಾದಂಬರಿಯ/ ವಸ್ತುವಿನ/ ಅಲ್ಲೋಚನೆಯ ಹೈಲೈಟ್!
ಮಂದಣ್ಣನನ್ನ ಗಮನಿಸಿದ ಕನ್ನಡದ ಓದುಗ ಅಂತಹಾ ಹಲವು ಮಂದಣ್ಣರನ್ನ ನಿಜ ಜೀವನದಲ್ಲಿ ಗೌರವಿಸಿದ್ದಾರೆ. ಇದು ತೇಜಸ್ವಿಯವರ ಮೂಲ ಆಶಯಕ್ಕೆ ಸಿಕ್ಕುತ್ತಿರುವ ಜಯ. ಇಂತಹಾ ಕರ್ವಾಲೋ, ಮಂದಣ್ಣ, ಹಾರೋತಿಯ, ಕಾಡಿನ ಬೆರಗಿನ ಮುಂದುವರಿದ ಭಾಗವೇ “ ನಿಲ್ಲು ನಿಲ್ಲೇ ಪತಂಗ “.
ಇಲ್ಲಿ ಪ್ರೊಫೆಸರ್, ಅವರ side kick ಹರೀಶ್ ಖೇರಾ, ಮಂದಣ್ಣ ಮತ್ತವನ ಮೊಮ್ಮಗ, ಪತಂಗ ಮತ್ತದರ ಮಡಗಾಸ್ಕರ್ ಕನೆಕ್ಷನ್, ಕಾಡಿನ ನಿಘೂಡತೆ, ಮೆದರಹಳ್ಳಿಯಂತಹದ್ದೇ ಮತ್ತೊಂದು ಅವಸಾನ ಗೊಂಡ ಹಳ್ಳಿ, ತಲೆ ಬುರುಡೆ ಕೇಸು ಮತ್ತು ಕರ್ವಾಲೋ, ಸ್ವತಃ ತೇಜಸ್ವಿಯವರ ಒಡನಾಟದ ನೆನಪುಗಳು (ಸೃಷ್ಟಿ) ನಮ್ಮನ್ನು ಮುದಗೊಳಿಸುತ್ತವೆ.
ಜನಪ್ರಿಯ ಕಾದಂಬರಿಯ, ಪಾತ್ರಗಳನ್ನು ಅದೇ ಲೇಖಕ ಮುಂದುವರಿಸುವುದು ಒಂದು ರೀತಿ ಆದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಅಂತಹುದ್ದೇ ಕಾದಂಬರಿಯನ್ನ ಬೋಲ್ಡ್ ಆಗಿ ಮರುಸೃಷ್ಟಿ ಮಾಡಿ ಅದಕ್ಕೆ ಹೊಸದೊಂದು ಕಥೆ ಹೆಣೆದು, ಕಾಡಿನ ಬೆರಗನ್ನು, ಪ್ರಕೃತಿಯ ಅನೂಹ್ಯತೆಯನ್ನು ಹಾಗೆಯೇ ಅದೆಲ್ಲದರ ಬಗ್ಗೆ ಮನುಷ್ಯನ ಆಸಕ್ತಿಯನ್ನು ಹೆಣೆದು ಕುತೂಹಲವಾದ ಕಥೆಯೊಂದನ್ನು ಚೆನ್ನಾಗಿ ನಿರೂಪಿಸುವುದರಲ್ಲಿ Harish Kera ಗೆದ್ದಿದ್ದಾರೆ.
ಒಂದೇ ಗುಕ್ಕಿನಲ್ಲಿ ಏನನ್ನೂ ಓದದ ನಾನು ಈ ಕಾದಂಬರಿಯನ್ನ ಅಪವಾದದಂತೆ ಓದಿದೆ.

Comments
Post a Comment