ಸಮಾನತೆ ಮತ್ತು ಸರಳತೆಯನ್ನು ಪ್ರತಿಪಾದಿಸುವ ಎರೆಡು ಜೀವಗಳ ಬಗೆಗಿನ ಈ ಪುಸ್ತಕ ನನ್ನನ್ನು ಬಹಳವಾಗಿ ಪ್ರಭಾವಿಸಿತು. ತೇಜಸ್ವಿ ಮತ್ತು ಶಾಮಣ್ಣರ ಸ್ನೇಹ, ಸಾಮಾಜಿಕ ಕಳಕಳಿ, ಬದ್ಧತೆ, ತೊಳಲಾಟ ತಿಕ್ಕಾಟಗಳು, ಮೀನು ಹಿಡಿಯುವುದು, ಪ್ರೆಸ್ ನೆಡೆಸುವುದು, ಸಂಗೀತ ಕಲಿಕೆ, ಕೃಷಿಯ ಪ್ರಯತ್ನಗಳು, ರೈತ ಸಂಘ, ರಾಜಕಾರಣ, ತಮ್ಮವರೊಡನೆ ಒಡನಾಟ, ಕೌಟುಂಬಿಕ ಪ್ರೀತಿ ಎಲ್ಲವೂ ಅನುಕರಣೀಯ.
ಅಣ್ಣನ ನೆನಪು, ನನ್ನ ತೇಜಸ್ವಿ, ತೇಜಸ್ವಿ ಪ್ರಸಂಗಗಳು ಮುಂತಾದ ಪುಸ್ತಕಗಳಲ್ಲಿ ಇರದ ಎಷ್ಟೋ ವಿಷಯಗಳು ಮುಖ್ಯವಾಗಿ ತೇಜಸ್ವಿಯವರ ಬಾಲ್ಯದ ಬಗ್ಗೆ ಈ ಪುಸ್ತಕದಲ್ಲಿ ದಾಖಲಾಗಿವೆ.
ಈ ಪುಸ್ತಕದಲ್ಲಿ ಕಡಿದಾಳು ಪ್ರಕಾಶ್ ರವರು ಅವರಿಬ್ಬರ ಬಗ್ಗೆಯಷ್ಟೇ ಅಲ್ಲದೆ ಐವತ್ತು ಅರವತ್ತು ವರ್ಷಗಳ ಇಡೀ ಮಲೆನಾಡಿನ ಸ್ಥೂಲ ಚಿತ್ರಣವನ್ನೇ ಕೊಟ್ಟಿದ್ದಾರೆ. ಎಷ್ಟೋ ಮುಖ್ಯವಾದ ವಿಷಯಗಳು ಇಲ್ಲಿ ದಾಖಲಾಗಿವೆ. ಅವುಗಳಲ್ಲಿ ಕುವೆಂಪು ಪ್ರತಿಷ್ಠಾನದ ಕಾರ್ಯ ಅದಕ್ಕೆ ಸಹಾಯ ಮಾಡಿದವರು, ಅದರ ಏಳು ಬೀಳು ಮುಂತಾದವುಗಳು ಮಹತ್ತರವಾದುವು.
ಇದು ಸರಳವಾಗಿ ಓದಿಸಿಕೊಂಡು ಹೋಗುವ ಮಹತ್ತರವಾದ ಪುಸ್ತಕ.

Comments
Post a Comment