“ಕಾರಂತರ ಸುಳಿಯಲ್ಲಿ”
##################################
ಕಾರಂತರು ತೀರಿದಾಗ ನನಗೆ 12 ವರ್ಷ.
ಈ ವಾರ್ತೆಯನ್ನು ತುಮಕೂರಿನ ನಮ್ಮ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹೇಳಿ “ ಕಡಲ ತೀರದ ಭಾರ್ಗವ” ಅಸ್ತಂಗತನಾದ ಎಂದು ನಮ್ಮ ಕನ್ನಡ ಮೇಷ್ಟ್ರು ಹೇಳಿದ್ದು ಈಗಲೂ ನೆನಪಿದೆ.
ಅವರ ಯಕ್ಷಗಾನ ಹೇಳಿಕೊಡುವ, ನೃತ್ಯಮಾಡುವ ದೃಶ್ಯಗಳನ್ನು DD ಚಂದನದಲ್ಲಿ ನೋಡಿದ್ದು ಜ್ಞಾಪಕವಿದೆ. ಅವರ ಬರವಣಿಗೆಯ ಕೆಲವು ಪಾಠಗಳು ನಮಗೆ ಹೈ ಸ್ಕೂಲಿನಲ್ಲಿ ಇದ್ದುದ್ದು ಅದು ಮುಗಿದಮೇಲೆ “ಕವಿ ಕೃತಿ ವಿಚಾರದಲ್ಲಿ” ಅವರ ಬಗ್ಗೆ ಒಂದು ಪ್ಯಾರಾ ಓದಿದ್ದು ಕೂಡಾ ಸ್ಪಷ್ಟ ನೆನಪು.
ಇಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ ಗೆಳೆಯ Karthik Herle ಕೋಟದಲ್ಲಿ (ಸಾಲಿಗ್ರಾಮ) ಬೆಳಗಿನ-ಸಂಜೆಯ ವಾಕಿಂಗ್ ಮಾಡುತ್ತಾ ಶಾಲೆಗೆ ಹೋಗುತ್ತಿದ್ದ ನಮ್ಮನ್ನು ಕಾರಂತರು ಕುಶಾಲಿಗೆ ಮಾತನಾಡಿಸುತ್ತಿದ್ದರು ಎಂದು ಹೇಳಿದಾಗ ಅವನ ಮೇಲೆ ಹೊಟ್ಟೆ ಉರಿ ಬಂದಿತ್ತು 🙂
ಕಾರಂತರು ಏನೆಲ್ಲ ಮಾಡಿದರು! ಬರವಣಿಗೆ, ಸಿನಿಮಾ, ಪ್ರೆಸ್, ನೃತ್ಯ, ಸಿನಿಮಾ, ಫೋಟೋಗ್ರಫಿ, ವಿಜ್ಞಾನ ವಿಶ್ವಕೋಶ, ತಿರುಗಾಟ, ಯಕ್ಷಗಾನ ಬಯಲಾಟ, ಸಂಸ್ಕೃತಿ ಉತ್ಸವಗಳು, ಭಾಷಣ, ಚುನಾವಣೆ, ಹೋರಾಟ ಅಬ್ಬಬ್ಬಾ!
ಸ್ವತಃ ರಾಷ್ಟ್ರಕವಿ GSS, ಕಾರಂತರ “ಬಾಲ ಪ್ರಪಂಚ” ನನ್ನ ಬಾಲ್ಯದ ಸಮೃದ್ಧ ಓದಿನ ನೆನಪಿನ ಬುತ್ತಿ ಎಂದಿದ್ದರು.
ಅಂತಹಾ ಕಾರಂತರ ಬಗ್ಗೆ ಅವರ ಮಕ್ಕಳು ಬರೆದ “growing up kaarant” ಪುಸ್ತಕ ಬಂದಾಗ ಯಾಕೋ ಕೊಂಡಿರಲಿಲ್ಲ. ಆದರೀಗ ಅದರ ಕನ್ನಡದ ಅನುವಾದವನ್ನ ನೋಡಿ Vishweshwar Bhat ಕುಷಿಯಿಂದ ಕೊಂಡು ಓದಿದೆ. I accumulated A tremendous amount of knowledge about Shivarama kaaranth ಅಂತಲೇ ಹೇಳಬೇಕು. ಇದರಲ್ಲಿ ಕಾರಂತರ ದಿನಚರಿ, ಸ್ನೇಹಿತರು, ಜೀವನಕ್ರಮದ ಜೊತೆಜೊತೆಗೆ ೧೯-೨೦ ನೇ ಶತಮಾನದ ದಕ್ಷಿಣ ಕನ್ನಡದ ಸ್ಥೂಲ ಚಿತ್ರಣ ಕಣ್ಣಿಗೆ ಬಂದಿತು. ಎಲ್ಲದಕ್ಕಿಂತ ಮುಖ್ಯವಾಗಿ ಕಾರಂತರ ಮಡದಿ “ ಶ್ರೀಮತಿ ಲೀಲಾ ಕಾರಂತರ” ಜೀವನ, ಒಡನಾಟ, ಬಂಟರಾದರೂ ಬ್ರಾಹ್ಮಣರ ಮನೆಯಲ್ಲಿ ಹೊಂದಿಕೊಂಡು ಜೀವನ ಕಟ್ಟಿಕೊಂಡ ಬಗೆ, ಅನುಭವಿಸಿದ ಯಾತನೆ-ಬವಣೆ, ನುಂಗಿಕೊಂಡ ನೋವುಗಳು ಮತ್ತದೆಲ್ಲಾ ಕಾರಂತರ ಏಳಿಗೆಗೆ ಕಾರಣವಾಗಿದ್ದು ಓದಿ ಮನಸ್ಸು ತೇವವಾಯ್ತು.
ವಿಶ್ವ ಮಾನ್ಯತೆಪಡೆದ ಕಾರಂತರ ಮಕ್ಕಳು ಅಪ್ಪನಂತೆಯೇ ನಿಷ್ಠೂರವಾದಿಗಳು. ಎಲ್ಲಿಯೂ ಅಪ್ಪನಿಗೆ free pass ಕೊಟ್ಟಿಲ್ಲ, ಆದರೆ ಅಮ್ಮ ಈ ಕೃತಿಯ ಮೂಲ, ಮತ್ತದು ಎಷ್ಟು ಸೂಕ್ತ , ತಡವಾದರೂ ಸಮಯೋಚಿತ! ಅವಿಭಜಿತ ಕನ್ನಡ ಜಿಲ್ಲೆಯ ೧೯-೨೦ ನೇ ಶತಮಾನದ ಜೀವನ ಪದ್ಧತಿ, ಒಂದು ಚಿತ್ರಣ ಅದರ ಜೊತೆಗೇ ಕಾರಂತರ ಕುಟುಂಬ, ಗೆಳೆಯರು, ಪ್ರಯೋಗಗಳು, ಸಿಟ್ಟು- ಸೆಡವು, ಸಣ್ಣ ಮತ್ತು ಹಿರಿತನಗಳು, ಸಮಾಜ ಹಿತ ಬಯಸಿದ್ದ ಅಸಂಖ್ಯ ಮನುಷ್ಯರು, ಬದುಕಿ ಬಾಳಿದ್ದ ಹತ್ತು ಸಮಸ್ತರ ಬಗ್ಗೆ ತಿಳಿಯಬೇಕಂದರೆ ಈ ಪುಸ್ತಕವನ್ನ ಕನ್ನಡದಲ್ಲಿಯೇ ಓದಬೇಕು!
ಮತ್ತೊಮ್ಮೆ ಕಡಲ ತೀರದ ಭಾರ್ಗವನಿಗೆ ನಮಸ್ಕಾರ 🙏🏼

Comments
Post a Comment