Skip to main content


 “ಕಾರಂತರ ಸುಳಿಯಲ್ಲಿ” 

##################################

ಕಾರಂತರು ತೀರಿದಾಗ ನನಗೆ 12 ವರ್ಷ. 

ಈ ವಾರ್ತೆಯನ್ನು ತುಮಕೂರಿನ ನಮ್ಮ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹೇಳಿ “ ಕಡಲ ತೀರದ ಭಾರ್ಗವ” ಅಸ್ತಂಗತನಾದ ಎಂದು ನಮ್ಮ ಕನ್ನಡ ಮೇಷ್ಟ್ರು ಹೇಳಿದ್ದು ಈಗಲೂ ನೆನಪಿದೆ. 

ಅವರ ಯಕ್ಷಗಾನ ಹೇಳಿಕೊಡುವ, ನೃತ್ಯಮಾಡುವ ದೃಶ್ಯಗಳನ್ನು DD ಚಂದನದಲ್ಲಿ ನೋಡಿದ್ದು ಜ್ಞಾಪಕವಿದೆ. ಅವರ ಬರವಣಿಗೆಯ ಕೆಲವು ಪಾಠಗಳು ನಮಗೆ ಹೈ ಸ್ಕೂಲಿನಲ್ಲಿ ಇದ್ದುದ್ದು ಅದು ಮುಗಿದಮೇಲೆ “ಕವಿ ಕೃತಿ ವಿಚಾರದಲ್ಲಿ” ಅವರ ಬಗ್ಗೆ ಒಂದು ಪ್ಯಾರಾ ಓದಿದ್ದು ಕೂಡಾ ಸ್ಪಷ್ಟ ನೆನಪು. 

ಇಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ ಗೆಳೆಯ Karthik Herle ಕೋಟದಲ್ಲಿ (ಸಾಲಿಗ್ರಾಮ) ಬೆಳಗಿನ-ಸಂಜೆಯ ವಾಕಿಂಗ್ ಮಾಡುತ್ತಾ ಶಾಲೆಗೆ ಹೋಗುತ್ತಿದ್ದ ನಮ್ಮನ್ನು ಕಾರಂತರು ಕುಶಾಲಿಗೆ ಮಾತನಾಡಿಸುತ್ತಿದ್ದರು ಎಂದು ಹೇಳಿದಾಗ ಅವನ ಮೇಲೆ ಹೊಟ್ಟೆ ಉರಿ ಬಂದಿತ್ತು 🙂

ಕಾರಂತರು ಏನೆಲ್ಲ ಮಾಡಿದರು! ಬರವಣಿಗೆ, ಸಿನಿಮಾ, ಪ್ರೆಸ್, ನೃತ್ಯ, ಸಿನಿಮಾ, ಫೋಟೋಗ್ರಫಿ, ವಿಜ್ಞಾನ ವಿಶ್ವಕೋಶ, ತಿರುಗಾಟ, ಯಕ್ಷಗಾನ ಬಯಲಾಟ, ಸಂಸ್ಕೃತಿ ಉತ್ಸವಗಳು, ಭಾಷಣ, ಚುನಾವಣೆ, ಹೋರಾಟ ಅಬ್ಬಬ್ಬಾ! 

ಸ್ವತಃ ರಾಷ್ಟ್ರಕವಿ GSS, ಕಾರಂತರ “ಬಾಲ ಪ್ರಪಂಚ” ನನ್ನ ಬಾಲ್ಯದ ಸಮೃದ್ಧ ಓದಿನ ನೆನಪಿನ ಬುತ್ತಿ ಎಂದಿದ್ದರು. 

ಅಂತಹಾ ಕಾರಂತರ ಬಗ್ಗೆ ಅವರ ಮಕ್ಕಳು ಬರೆದ “growing up kaarant” ಪುಸ್ತಕ ಬಂದಾಗ ಯಾಕೋ ಕೊಂಡಿರಲಿಲ್ಲ. ಆದರೀಗ ಅದರ ಕನ್ನಡದ ಅನುವಾದವನ್ನ ನೋಡಿ Vishweshwar Bhat ಕುಷಿಯಿಂದ ಕೊಂಡು ಓದಿದೆ. I accumulated A tremendous amount of knowledge about Shivarama kaaranth ಅಂತಲೇ ಹೇಳಬೇಕು. ಇದರಲ್ಲಿ ಕಾರಂತರ ದಿನಚರಿ, ಸ್ನೇಹಿತರು, ಜೀವನಕ್ರಮದ ಜೊತೆಜೊತೆಗೆ ೧೯-೨೦ ನೇ ಶತಮಾನದ ದಕ್ಷಿಣ ಕನ್ನಡದ ಸ್ಥೂಲ ಚಿತ್ರಣ ಕಣ್ಣಿಗೆ ಬಂದಿತು. ಎಲ್ಲದಕ್ಕಿಂತ ಮುಖ್ಯವಾಗಿ ಕಾರಂತರ ಮಡದಿ “ ಶ್ರೀಮತಿ ಲೀಲಾ ಕಾರಂತರ” ಜೀವನ, ಒಡನಾಟ, ಬಂಟರಾದರೂ ಬ್ರಾಹ್ಮಣರ ಮನೆಯಲ್ಲಿ ಹೊಂದಿಕೊಂಡು ಜೀವನ ಕಟ್ಟಿಕೊಂಡ ಬಗೆ, ಅನುಭವಿಸಿದ ಯಾತನೆ-ಬವಣೆ, ನುಂಗಿಕೊಂಡ ನೋವುಗಳು ಮತ್ತದೆಲ್ಲಾ ಕಾರಂತರ ಏಳಿಗೆಗೆ ಕಾರಣವಾಗಿದ್ದು ಓದಿ ಮನಸ್ಸು ತೇವವಾಯ್ತು. 

ವಿಶ್ವ ಮಾನ್ಯತೆಪಡೆದ ಕಾರಂತರ ಮಕ್ಕಳು ಅಪ್ಪನಂತೆಯೇ ನಿಷ್ಠೂರವಾದಿಗಳು. ಎಲ್ಲಿಯೂ ಅಪ್ಪನಿಗೆ free pass ಕೊಟ್ಟಿಲ್ಲ, ಆದರೆ ಅಮ್ಮ ಈ ಕೃತಿಯ ಮೂಲ, ಮತ್ತದು ಎಷ್ಟು ಸೂಕ್ತ , ತಡವಾದರೂ ಸಮಯೋಚಿತ! ಅವಿಭಜಿತ ಕನ್ನಡ ಜಿಲ್ಲೆಯ ೧೯-೨೦ ನೇ ಶತಮಾನದ ಜೀವನ ಪದ್ಧತಿ, ಒಂದು ಚಿತ್ರಣ ಅದರ ಜೊತೆಗೇ ಕಾರಂತರ ಕುಟುಂಬ, ಗೆಳೆಯರು, ಪ್ರಯೋಗಗಳು, ಸಿಟ್ಟು- ಸೆಡವು, ಸಣ್ಣ ಮತ್ತು ಹಿರಿತನಗಳು, ಸಮಾಜ ಹಿತ ಬಯಸಿದ್ದ ಅಸಂಖ್ಯ ಮನುಷ್ಯರು, ಬದುಕಿ ಬಾಳಿದ್ದ ಹತ್ತು ಸಮಸ್ತರ ಬಗ್ಗೆ ತಿಳಿಯಬೇಕಂದರೆ ಈ ಪುಸ್ತಕವನ್ನ ಕನ್ನಡದಲ್ಲಿಯೇ ಓದಬೇಕು! 

ಮತ್ತೊಮ್ಮೆ ಕಡಲ ತೀರದ ಭಾರ್ಗವನಿಗೆ ನಮಸ್ಕಾರ 🙏🏼

Comments

Popular posts from this blog

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ