Skip to main content

ನನ್ನ ತಂಗಿ ಈಡಾ

 ಹರ್ಷರ ಈ ಅನುವಾದ ಅತ್ಯಂತ ಮುತುವರ್ಜಿ ಮತ್ತು ಸಂಯಮದ ಕೃಷಿ ಅನ್ನಿಸಿತು. ಕಾದಂಬರಿಯ ಜರ್ಮನ್ ಹೆಸರು 22 Bahnen ಅಂದರೆ ಬಹುಷ ೨೨ ಸುತ್ತುಗಳು. 

ಇಲ್ಲಿ ಈಜುಕೊಳ ಒಂದು ಪ್ರತೀಕವಾಗಿ, ಪಾತ್ರವಾಗಿ, ಮನಸಿನ ಪ್ರೆಷರ್ ಕುಕರ್ನ ಸೀಟಿಯಾಗಿ ಗಮನ ಸೆಳೆಯುತ್ತದೆಯಾದರೂ ಕಡೆಗೂ ಇದು ಹುಡುಗಿಯೊಬ್ಬಳ ಮತ್ತವಳ ಪುಟ್ಟ ತಂಗಿ ಈಡಾಳ ನಡುವಿನ ಪ್ರೀತಿ ಮತ್ತು ಸ್ನೇಹದ ಕಥೆಯಾಗಿದೆ.


ಇಲ್ಲಿ ವ್ಯಸನಿ ತಾಯಿ, ಪರಾರಿಯಾದ ತಂದೆ, ಹದಿಹರೆಯದ ಮನಸ್ಥಿತಿ ಎಲ್ಲ ಇದ್ದರೂ ಅದೆಲ್ಲದುದರ ನಡುವೆ ತನ್ನ ಜವಾಬ್ದಾರಿ ಮರೆಯದ ಅಕ್ಕ ಟಿಲ್ಡಾ ಮತ್ತು ಅವಳನ್ನು ಅನುಕರಿಸುವ ಆದರೂ ಸ್ವತಂತ್ಯ್ರ ವ್ಯಕ್ತಿತ್ವದ ಈಡಾರ ಕಥೆಯಾಗಿದೆ. ನನ್ನನ್ನು ಕೇಳಿದರೆ ಜರ್ಮನ್ನಲ್ಲೂ ಇದಕ್ಕೆ ಸೂಕ್ತ ಹೆಸರು “ ನನ್ನ ತಂಗಿ ಈಡಾ” ಎಂದೇ ಹೇಳುವೆ. ಇದು ಹರ್ಷನ ಅನುವಾದದ ಮೊದಲ ಗೆಲುವು ಎಂಬುದು ನನ್ನ ಬಲವಾದ ನಂಬುಗೆ. 

ಕ್ಯಾರೋಲಿನ್ ವಾಲ್ ನ ಈ ಕಾದಂಬರಿಯಲ್ಲಿ ಎಲ್ಲಕ್ಕೂ ಜೀವ ಬಂದಿದೆ ಅನ್ನಿಸುತ್ತದೆ. ಇದು ಜರ್ಮನ್ನರು ಭಾವನಾ ರಹಿತರು (ಕಾಫ್ಕಾನ ಕ್ಷಮೆ ಕೇಳುತ್ತಾ !) ಎಂಬ ನನ್ನ ಸಂಕುಚಿತ ದೃಷ್ಟಿಯನ್ನು ಹೊಡೆದು ಉರುಳಿಸಿದೆ. ಅದು ಅನುವಾದದಲ್ಲೂ ತುಂಬಾ ಚೆನ್ನಾಗಿ ಆವಿರ್ಭವಿಸಿದೆ. 

ಕಾದಂಬರಿಯಲ್ಲಿ ಬರುವ ಹಲವು ಮಾತುಕಥೆ ಸನ್ನಿವೇಶಗಳನ್ನು ಹರ್ಷ ನಾಟಕಗಳಲ್ಲಿ ಮಾಡುವ ಹಾಗೆ ಆಯಾ ಪಾತ್ರದ ಹೆಸರು ಕೊಟ್ಟು ಅನುವಾದಿಸಿರುವುದು, ಅಕ್ಕ ತಂಗಿಯ ಮಧ್ಯೆ ಬರುವ ಸಿಹಿಯಾದ ಸನ್ನಿವೇಶಗಳನ್ನು ಅಷ್ಟೇ ಮಧುರವಾಗಿ ಮತ್ತು ಸರಳವಾಗಿ ಕಟ್ಟುಕೊಟ್ಟಿರುವುದು, ಪಾತ್ರ ಪ್ರಕೃತಿಯ ವಿವರಣೆ, ಹರೆಯದವರ ಲಿಂಗೋ (ನುಡಿಗಟ್ಟುಗಳು / slang) ತೀರಾ ಬೇಕಾದಲ್ಲಿ ಜರ್ಮನ್ನ ಬಳಕೆ ಎಲ್ಲವೂ ಪೂರಕವಾಗಿವೆ. ಇದರ ಮಧ್ಯೆ ಅವನೇ ಹೇಳುವ ಹಾಗೆ ಜರ್ಮನ್ ಮತ್ತು ಕನ್ನಡದ ಮಧ್ಯೆ ಇಂಗ್ಲಿಶ್ಗೆ ಏನು ಕೆಲಸವೆಂಬಂತೆ ಕೂರು ಕೋಣೆ ( living room), ದೀಪಮಾಲೆ (serial set) ಎಂಬ ಪದಗಳು, ಮ್ಯಾನರಿಸಂ ಅನ್ನ ಹೇಳುವಾಗ “ ಹೆಗಲು ಹಾರಿಸಿದ/ಳು” ಎಂಬ ಬಳಕೆ ತುಂಬಾ ಫ್ರೆಶ್ ಆಗಿದೆ ಅನಿಸಿತು. 

ಹರ್ಷ ಬೆಂಗಳೂರೆಂಬ ಅರ್ಬನ್ ಪರಿಸರದಲ್ಲಿ ಬೆಳೆದದ್ದರಿಂದ ಮತ್ತು ಅವನ ಪ್ರಸ್ತುತ ವಯಸ್ಸಿನ ಅಡ್ವಾಂಟೇಜ್ ಇಂದ ಬಹುಶ ಜರ್ಮನಿಯ, ಹದಿಹರೆಯದವರ ತುಮುಲ- ತಲ್ಲಣಗಳನ್ನು, ಬೇಕು-ಬೇಡ, ರೀತಿ-ರಿವಾಜು ಗಳನ್ನು, ಇಷ್ಟ-ಅನಿಷ್ಟಗಳನ್ನು ಚೆನ್ನಾಗಿ ಅರಿತು, ನೋಡಿ, ತಾಳೆಹಾಕಿ ಹಲವೆಡೆ ಸಮರ್ಥವಾಗಿ ಬಳಸಿದ್ದಾನೆ ಅನ್ನಿಸಿತು. 

ಇದೆಲ್ಲಕ್ಕೂ ಮುಖ್ಯ ಇಂಬು ಅವನ ಜರ್ಮನ್ ಕಲಿಕೆ, ಸಾಹಿತ್ಯದ, ಭಾಷೆಯ ಮತ್ತು ಬದುಕಿನೆಡೆಯ ಆಸಕ್ತಿ ಅನ್ನಿಸಿತು ನನಗೆ. ಇದನ್ನು ತುಂಬಾ inventive ಆಗಿ ಕಂಡಿತು. ಇವೆಲ್ಲದಕ್ಕೂ ನಾವು ಅವನನ್ನು ಮತ್ತು ಛಂದದ ವಸುಧೇಂದ್ರ ಅವರನ್ನು ಅಭಿನಂದಿಸಲೇಬೇಕಾಗುತ್ತದೆ.

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...