Skip to main content

‘ಫೂ’ ಕಥಾ ಸಂಕಲನದ ಬಗೆಗಿನ ಅನಿಸಿಕೆ


ಮಂಜುನಾಯಾಕರೇ ನಿಮ್ಮ ‘ಫೂ’ ಸಂಕಲನದಲ್ಲಿ ಇನ್ನಷ್ಟು ಕಥೆಗಳಿರಬಾರದಾ ಎನ್ನಿಸುವಷ್ಟು ಖುಷಿಯಾಯ್ತು ಓದಿ. 

ಇದು ಓದಿಗಿಂತಾ ಒಂದು ಅನುಭೂತಿ …ಕೆಲವೇ ಕೆಲವು ಬರಹಗಾರರಲ್ಲಿ ಮತ್ತು ಕೆಲವು ಬರಹಗಳಲ್ಲಿ ಇರುವ ದ್ರವ್ಯ.

‘ಪಾತಿ’ ಎಂಬ ಚಂದದ, ಮನಕಲುಕುವ, ಮುಗ್ದ, ಹಸಿ ಬಿಸಿ  ಪ್ರೇಮ ಕಥೆಯನ್ನು ಹೊರತು ಪಡಿಸಿದರೆ ಮತ್ತೆಲ್ಲ ಕಥೆಗಳಲ್ಲೂ ಒಂದನ್ನೊಂದು ಬೆಸೆಯುವ ಅಂಶ ಇದೆ ಅನ್ನಿಸಿತು. ಅದು ಮುಖ್ಯವಾಗಿ ಪಾತ್ರಗಳ ಜೀವನದ ‘ಹುಡುಕಾಟದಲ್ಲಿ’, ತಹತಹಿಕೆಯಲ್ಲಿ ಕಾಣಿಸುತ್ತದೆ….’ಪಾತಿ’ ಯಲ್ಲಿ ಪ್ರೇಮ ಮತ್ತು ಸಲ್ಲಾಪಗಳು ಬಹುಷ ಅದನ್ನು ಮರೆಮಾಚಿರಬಹುದು ! 

ವಜ್ರಮುನಿಯ ಬಂಕಿನ (ಕೊಟ್ಟಿಗೆ ಮನೆಯ)ಆಧ್ಯಾತ್ಮ,ಏಕಕಾಲಕ್ಕೆ ಲೌಕಿಕವೂ- ಅಲೌಕಿಕವೂ ಪ್ರಸ್ತುತ - ಅಪ್ರಸ್ತುತ ಎಲ್ಲವೂ ಆಗಬಹುದು, ಹಾಗೆಯೇ ಅಪ್ಪ ಮತ್ತು ಮಗನನ್ನು ಬೆಸೆಯುವ ಕೊಂಡಿಯೂ ಆಗಿರಬಹುದು.

“ಮಿಂಚು ಹುಳದಲ್ಲಿ“ ಬರುವ ಹುಡುಗನನ್ನು ಕಾಡುವ, ವಿಚಿತ್ರ ತಳಮಳವನ್ನ, ಹೇಳಿಕೊಳ್ಳಲಾಗದ, ಸುಮ್ಮನಿರಲಾಗದ, ಪರಿಹರಿಸಿಕೊಳ್ಳಲಾಗದ, ಸ್ಪಷ್ಟವಾಗಿ ಬರೆಯಲೂ ಸಾಧ್ಯವಾಗದ….ಒಟ್ಟಿನಲ್ಲಿ ಇಲ್ಲಿನ ಮಿಂಚುಹುಳುವಿನ ಸಂಕೇತವೇ  ಓದುಗನಿಗೆ ಬೆಳಕಲ್ಲದ ಆದರೆ ಕತ್ತಲೂ ಅಲ್ಲದ ಪರಿಸ್ಥಿತಿಯನ್ನ ದಾಟಿಸುವ ಸಮರ್ಥ ಬಳಕೆ ಅಂತ ಅನ್ನಿಸಿತು. ಇಲ್ಲೇ ‘ಕಥೆ’ ಭಾವ- ಬುದ್ಧಿಯನ್ನು ಮೀರಿ ಆದರಾಚೆಗಿನ ಅನುಭೂತಿಯನ್ನು ಮುಟ್ಟುವುದು ಅನ್ನಿಸುತ್ತದೆ. 

“ಖತಲ್ ರಾತ್ರಿ” ನಮ್ಮೂರಿನ ಮೊಹರಂ ಆಚರಣೆಯನ್ನು “ ಬಾಬಯ್ಯನ್ ಗುಂಡಿಗೆ ಸೌದೆ ಕೊಡ್ರಿ” ಈ ಎಂದು ಬರುತ್ತಿದ್ದ ಸಾಬರ ಹುಡುಗರನ್ನು ಆ ದಿನಕ್ಕೆ ಸಜಾಗುತ್ತಿದ್ದ ಎಲ್ಲ ಹುಡುಗರನ್ನೂ ನೆನಪಿಸಿತು. 

“ತೇರು ಸಾಗಿತಮ್ಮ ನೋಡಿರೆ” ಮತ್ತು “ ಕನಸಿನ ವಾಸನೆ” ಕಥೆಗಳು ಮನುಷ್ಯ ಸಂಬಂಧಗಳ ಬಗ್ಗೆ ಆಶ್ಚರ್ಯವನ್ನು, ಭರವಸೆಯನ್ನು , ಮಿತಿಯನ್ನು ಮತ್ತು ಸುಲಭವಾಗಿ ಅರ್ಥವಾಗದ ಆದರೆ ಗುಪ್ತಗಾಮಿನಿಯಂತಿರುವ ಕೊಸರನ್ನು ಕಾಣಿಸಿದರೆ, Cover page story “ ಫೂ” ಮಾತ್ರ ನನ್ನತ್ತೆಯನ್ನ ನೆನಪಿಸಿತು. ನನ್ನ ಬಾಲ್ಯದಲ್ಲಿ ಅವಳು ಮತ್ತೊಬ್ಬ ಅಮ್ಮನೇ ಆಗಿದ್ದಳು ಮತ್ತು ಅವಳ ಜೀವನದಲ್ಲೂ ಅನಿರೀಕ್ಷಿತ ಘಟನೆಗಳು ನಡೆದು ಕೆಲಕಾಲ ಶಾಪಗ್ರಸ್ಥಲಾಗಿದ್ದಳು. 

ಈ ಕಥೆ ಯಾಕೋ ವೈದೇಹಿಯವರ ‘ಟುವಾಲು’ ಕಥೆಯನ್ನು ನೆನಪಿಸಿತು. 

ನಿಮ್ಮ ಮುಂದಿನ ಎಲ್ಲ ಕಥೆಗಳು ಯಾವುದೇ ಕಾರಣಕ್ಕೂ ಮುಗ್ದತೆಯನ್ನು  ಮತ್ತು ಬೆರಗನ್ನು ಕಳೆದೂಕೊಳ್ಳದೇ ಇರಲೆಂದು ಆಶಿಸುವೆ.

(ಎಂದೋ ಓದಬೇಕಿದ್ದ ಪುಸ್ತಕವನ್ನು ತ್ವರಿತವಾಗಿ ಓದಲು ಪ್ರೇರೇಪಿಸಿದ Poornima Malagimani ಯವರ ಬರಹಕ್ಕೆ 

ಅಕ್ಕರೆ. ಪ್ರಕಟಿಸಿದ Akshatha Humchadakatte ಅಕ್ಕನಿಗೆ more power 👍🏼)

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...