Skip to main content

"The educational heritage of ancient india ", by sahana singh

 

ಇದೊಂದು 82 ಪುಟಗಳ ಪುಟಾಣಿ ಪುಸ್ತಕ. ಆದರೆ ಇದು


ಹೊತ್ತುಕೊಂಡ ಜವಾಬ್ದಾರಿ ಬಹಳ ದೊಡ್ಡದು.ಪ್ರಾಚೀನ ಭಾರತದಲ್ಲಿನ ವಿದ್ಯಾಭ್ಯಾಸ ಮತ್ತು ಕಲಿಕೆಯ ಪರಂಪರೆಯನ್ನ ಪರಿಚಯ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ.ಸಾವಿರ ಸಾವಿರ ಪೇಜುಗಳು ಬರೆದರೂ ಕಡಿಮೆಯೇ ಎಂದೆನಿಸಿದ್ದು ಈ ಪುಸ್ತಕವನ್ನು ಓದಿ ಅದರೊಳಗೆ ಕೊಟ್ಟಿದ್ದ reference ಪುಸ್ತಕಗಳ ಪಟ್ಟಿ ನೋಡಿದಮೇಲೆಯೇ. 


ಈ ಪುಸ್ತಕಕ್ಕೆ ಇಷ್ಟು ಓದಿಕೊಂಡಿದ್ದಾರೆ ಇದರ ಕರ್ತೃ ಸಹನಾ ಸಿಂಗ್.ಇದು ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಪರಿಚಯಿಸುತ್ತದೆ. ಅದೆಂದರೆ ಶತಮಾನಗಳ ಮುಂಚೆಯೇ ಇದ್ದ ಗುರುಶಿಷ್ಯ ಪರಂಪರೆ, ವಿಶ್ವವಿದ್ಯಾಲಯಗಳು, ಅಲ್ಲಿನ ಲಿಂಗಭೇಧವಿಲ್ಲದ ಮುಕ್ತ ವಾತಾವರಣ, ಗ್ರಂಥಾಲಯಗಳು ಅಲ್ಲಿ ಕಲಿಸಲ್ಪಡುತ್ತಿದ್ದ ವ್ಯಾಕರಣ, ಗಣಿತ, ಕಲೆ, ವ್ಯಾಪಾರ, ತರ್ಕ, ಅರೋಗ್ಯ ಸಂಬಂಧಿ ವಿಷಯಗಳು ನೀಡುತ್ತಿದ್ದ ಪದವಿಗಳು, ಹೆಣ್ಣು ಮಕ್ಕಳಿಗಿದ್ದ ತಮ್ಮನ್ನು ಬೇಕಾದವರನ್ನು ಮದುವೆಯಾಗುವ ಅಥವಾ ಬ್ರಹ್ಮಚಾರಿಗಳಾಗೆ ಇದ್ದು ಜ್ಞಾನಾರ್ಜನೆ ಮುಂದುವರೆಸುವ ಸ್ವಾತಂತ್ರ್ಯ ಇತ್ಯಾದಿ. 


ಇಲ್ಲಿ ಪ್ರಸ್ತುತ ಪಾಕಿಸ್ತಾನದ ರಾವಲಪಿಂಡಿಯಲ್ಲಿ ದ್ವಂಸವಾಗಿರುವ ತಕ್ಷಶಿಲಾ ವಿಶ್ವವಿದ್ಯಾಲಯದ ಅದರ ಹಿಂದಿನ ವೈಭವದ ಬಗೆಗಿನ ವಿಸ್ತೃತ ವಿವರಣೆಯಿದೆ. ಅದರ ನಂತರ ಬಿಹಾರದ ನಳಂದಾ, ವಿಕ್ರಮಶೀಲ ಕಾಶ್ಮೀರದ ಶಾರದಾ ಕಂಚಿಯ ವಿಶ್ವವಿದ್ಯಾಲಯಗಳು ಇವುಗಳ ನಡುವಿದ್ದ ಪೈಪೋಟಿ ಅವು ಶಿಕ್ಷಕ ಮತ್ತು ಛಾತ್ರರನ್ನು ಸೆಳೆಯಲು ಮಾಡುತ್ತಿದ್ದ ಪೈಪೋಟಿ ಮತ್ತು ನೋಂದಣಿಗೆ ಇಡುತ್ತಿದ್ದ ಕ್ಲಿಷ್ಟ ಪ್ರವೇಶ ಪರೀಕ್ಷೆಗಳು ಆ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರುಮಾಡುವ coaching ಸೆಂಟರ್ಗಳು ಇವೆಲ್ಲವುದರ ಬಗೆಗಿನ ಅನೂಹ್ಯ ಮಾಹಿತಿಗಳಿವೆ. 


ಪ್ರಕೃತಿ ನಡುವಿನಲ್ಲಿದ್ದ ಗುರುಕುಲಗಳ ಧ್ಯೇಯಗಳು ಅವು ವಟುಗಳಲ್ಲಿ ಮೂಡಿಸುತ್ತಿದ್ದ ಮೌಲ್ಯ ಮಾದರಿಗಳು ಅಚ್ಚರಿ ಹುಟ್ಟುಸುತ್ತವೆ. ಅಷ್ಟೇ ಅಲ್ಲದೆ ಇಲ್ಲಿನ ಬಹುಪಾಲು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 30 ಕ್ಕಿಂತಾ ಹೆಚ್ಚಿರದಿದ್ದುದ್ದು ಬ್ರಾಹ್ಮಣೇತರರಿಗೆ ಇದ್ದ ಅವಕಾಶಗಳ ಬಗ್ಗೆ ಖುಷಿ ಮೂಡಿಸುತ್ತದೆ. ಇದು ಇಲ್ಲಿಯವರಿವಿಗೂ ಬಹುಪಾಲು ಜನರಿಗೆ ತಿಳಿಯದಿದ್ದ ಮಾಹಿತಿ ಅನ್ನಿಸುತ್ತದೆ. 


ಅನೇಕ ಶಿಕ್ಷಣ ಸಂಸ್ಥೆಗಳ ಉಳಿವು ರಾಜಾಶ್ರಯ ಮಾತ್ರವಲ್ಲದೆ ಹಳ್ಳಿಗಳ ನೆರವಿನಿಂದ ಬಂದ ಹಣದಿಂದ ನಡೆಯುತ್ತಿತ್ತು ಎಂದು ತಿಳಿದಾಗ ಆಗಿನ ಜನರಿಗೆ ವಿದ್ಯೆಯಮೇಲೆ ಇದ್ದ ಗೌರವದ ಬಗ್ಗೆ ಆ ಪರಂಪರೆಯ ಬಗೆಗೆ ಕೃತಜ್ಞತೆ ಮೂಡುತ್ತದೆ. 


ಹಲವು ಪಂಗಡಗಳನ್ನು ಸಮಾಜ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದೆ. ಅವರನ್ನು ಕನಿಷ್ಠ ಮರ್ಯಾದೆಯೂ ಕೊಡದೆ ನಗಣ್ಯವಾಗಿ ಸಹ ನೋಡಿದೆ. ಆದರೂ ಅಂದಿನ ಒಳ್ಳೆಯ ತನಗಳ ಬಗ್ಗೆ ನಾವು ಓದಿದ್ದು ಕಡಿಮೆಯೇ ! ಇದು ನಮ್ಮ ಇತಿಹಾಸದ ಅರ್ಧಸತ್ಯದ ತಿಳುವಳಿಕೆಯ ರಾಜಕೀಯವೇ ಆಗಿದೆ ಮತ್ತು ಸತ್ಯ ಅದರ ಕಪಿಮುಷ್ಟಿಯಲ್ಲೇ ಶತಮಾನಗಳು ನರಳಿದೆ. 


ನಮ್ಮಲ್ಲಿ ಅತ್ಯಂತ ಸಮರ್ಥ ಶಿಕ್ಷಣ ಪದ್ಧತಿ ಮತ್ತು ಪರಂಪರೆ ಮೊದಲು ಮುಸ್ಲಿಂ ಮತಾಂಧರ ನಂತರ ಸುಲ್ತಾನರ ಆಳ್ವಿಕೆಯಲ್ಲಿ ನರಳಿ ಬವಳಿ ಬೆಂಡಾಗಿ ನಂತರ ಬ್ರಿಟೀಷರ ( ಲಾರ್ಡ್ ಮೆಕಾಲೆಯಂಥವರ ) ಕೈಯಲ್ಲಿ ಅಸುನೀಗಿದ್ದರ ಪರಿಣಾಮಕಾರಿ ಚಿತ್ರಣವಿದೆ. 

ನಮ್ಮದೆಲ್ಲ ಶ್ರೇಷ್ಠ ಎನ್ನುವವರು ಒಂದುಕಡೆಯಾದರೆ ಆ ಎಲ್ಲವನ್ನೂ ಅಲ್ಲಗಳೆಯುವವರು ಇನ್ನೊಂದು ಕಡೆ. ಈ ಇಬ್ಬರೂ ಈ ಪುಸ್ತಕವನ್ನು ಮತ್ತು ನಂತರದಲ್ಲಿ ಕೊಡಮಾಡಿದ ರೆಫರೆನ್ಸ್ ಪುಸ್ತಗಳನ್ನೊಮ್ಮೆ ಓದಿದರೆ ಅಭಿಪ್ರಾಯಗಳು ಕೊಂಚ ಬದಲಾಗಬಹುದು, ಅರಿವು ವಿಸ್ತರಿಸಬಹುದು. ನಮ್ಮ ಪರೆಂಪರೆಯಲ್ಲಿ ಅಡಗಿಹೋದ ಕೆಲವು ಸಂಗತಿಗಳ ಬಗ್ಗೆ ಮತ್ತು ಉದುಗಿಹೋದ ಪ್ರಶ್ನೆಗಳ ಉತ್ತರ ಸಿಗಬಹುದು. 

Comments

Popular posts from this blog

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...