Skip to main content

Posts

Showing posts from November, 2022

" ಸು " ಕಾದಂಬರಿ

 ಪ್ರಸನ್ನ ಸರ್, ತಮ್ಮ ಬಹುಚರ್ಚಿತ ಕಾದಂಬರಿ "ಸು" ಓದಿದೆ. ಒಬ್ಬ ಸಂಶೋಧಕನಾಗಿ ನನಗೆ ಕೃತಿಯ ವಸ್ತುವಿನ ಬಗ್ಗೆ ತುಂಬಾ ಕುತೂಹಲವಿದ್ದದ್ದರಿಂದ ನೀವು ಅದನ್ನ ಇನ್ನಷ್ಟು ಮುಂದುವರಿಸಬಹುದಿತ್ತು ಅನ್ನಿಸಿತು. ಇದು ನನಗೆ ಕಾದಂಬರಿಯ ಜೊತೆ ಜೊತೆಗೆ ನೆನಪಿನ ಆತ್ಮೀಯ ಕಥನ ಅನ್ನಿಸಿತು. ನಡುನಡುವೆ 'ಸು' ಗೆ ಮತ್ತು ಪ್ರಕಾಶನಿಗೆ ಬರುವ abstract ಕನಸುಗಳು ಮತ್ತು ಆಲೋಚನೆಗಳು ಕುತೂಹಲ ಹುಟ್ಟಿಸಿದವು. ಇದು ಒಂದು ರೀತಿ ಬೇರೆಯೇ ಪ್ರಯೋಗ! ತುಂಬಾ ವಿಷಯಗಳನ್ನ ಒಂದೇ ಕಾದಂಬರಿಯಲ್ಲಿ ತಂದಿದ್ದೀರಿ. 'ಸು' ಎಂಬ ಚೀನಿ ಮನುಷ್ಯ ಸ್ವಾರಸ್ಯಕರವಾಗಿದ್ದಾನೆ. ಅವನ ಬಗ್ಗೆ ನೀವು ಪ್ರಬಂಧಗಳನ್ನು ಬರೆಯಬೇಕು. ಬಹುಷಃ ಅಲ್ಲಿ ಕಾದಂಬರಿಯ ಮಾದರಿಯಲ್ಲಿ ಇಲ್ಲಿ ಹೇಳಲಾಗದ ಮಾತುಗಳನ್ನು, ವಿಚಾರಗಳನ್ನು ಹೇಳಬಹುದೇನೋ? ಈ ಕೃತಿಯ 'ವಸ್ತು' ಗೆದ್ದಿದೆ. ಆದರೆ ಯಾಕೋ ಇದೊಂದು ಅತೀ ಮಹತ್ವದ ಕೃತಿಯಾಗಬಹುದಿತ್ತೇನೋ ಎಂದು ನನಗೆ ಓದಿದ ಕ್ಷಣಕ್ಕೆ ಅನಿಸತೊಡಗಿದೆ. ಒಂದು ವಿಭಿನ್ನ ಪ್ರಯತ್ನಕ್ಕಾಗಿ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

ZERO TO ONE by Peter Thiel

 "ZERO TO ONE - Notes on startups" by Peter Thiel 'Zero to One' signifies a fundamental transformation in technologies rather than incremental innovation or improvements.  Peter thiel who is a celebrated investor in various successful start ups like Facebook, Spotify, Tesla to name a few and co founder of Paypal and Palantir technologies offers a first hand perspective of technology, investments, scale up and dynamics in any start-up.  His theory is simple which is, have a pre history with the people who you start company with, focus on technology and product rather than behaving like salesman amassing founders or venture capitalists dollars! Have a brilliant engineer at the helm to set affairs in order rather than an MBA who has no clue on the product, keeping future in mind make sure your products have relevance as time passes. This book is the result of class notes Peter compiled for his Stanford class on entrepreneurship and here are his seven commandments for an...

|ಅರ್| ಎಸ್ |ಎಸ್| ಆಳ ಮತ್ತು ಅಗಲ

 ಈ ಪುಸ್ತಕ ಬಿತ್ತಿಪತ್ರದ ಮಾದರಿಯದ್ದು. ಆದರೆ ಇದು ಎತ್ತುವ ಪ್ರಶ್ನೆಗಳು RSS ನ ಪೂರ್ವ ಸೂರಿಗಳಾದ ಗೋಲ್ವಾಳ್ಕರ್, ಹೆಡಗೇವಾರ್, ಸಾವರ್ಕರ್ ಗಳೇ ಮೊದಲಾದವರ ಪುಸ್ತಕಗಳಿಂದ, ವಿಚಾರ ಮತ್ತು ಭಾಷಣಗಳಿಂದ ಹೊಮ್ಮಿದ್ದು. ಪ್ರಗತಿಪರರ ಯಾವತ್ತಿನ ತಕರಾರುಗಳಾದ ಚಾತುರ್ವರ್ಣ ಪದ್ಧತಿ, ಮನುಸ್ಮೃತಿ, ಶ್ರೇಣಿಕೃತ ಸಮಾಜ ಇವೇ ಮುಂತಾದ ವಿಚಾರಗಳು ಇಲ್ಲಿ ಚರ್ಚೆಯಾಗಿವೆ. ಅದರ ಜೊತೆಗೆ ಹೋರಾಟಗಳ ಇಂದಿನ ಸವಾಲುಗಳು ಮತ್ತು ಅವು ಸವಕಲಾಗುತ್ತಿರುವುದರ ಬಗ್ಗೆಯೂ ಜಿಜ್ಞಾಸೆ ಇದೆ. ಒಟ್ಟಿನಲ್ಲಿ ಈ ಪುಸ್ತಕ RSS ನ ಆಳ ಅಗಲವನ್ನು ಮುಟ್ಟಿಲ್ಲವಾದರೂ ಒಂದು ಪ್ರಯತ್ನವಂತೂ ಮಾಡಿದೆ. ಇದನ್ನು ಒಪ್ಪದವರು ಇದನ್ನು ವೈಚಾರಿಕವಾಗಿಯೇ ಎದಿರುಗೊಳ್ಳಬೇಕು ಮತ್ತು ಇಲ್ಲಿ ಎತ್ತಲ್ಪಟ್ಟಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಬೇಕು ಎನ್ನುವುದು ಈ ಬರಹದ ಆಶಯ!

ಡುಮಿಂಗ

ಈ ಹೆಸರೇ ವಿಚಿತ್ರವಾಗಿದೆಯಲ್ಲ ಎಣಿಸಿ ಆಗ ಬಾಲಮಂಗಳದಲ್ಲಿ ಬರುತ್ತಿದ್ದ "ಡಿಂಗ" ನನ್ನ ನೆನಪಿಸಿಕೊಂಡೆ! ಆಮೇಲೆ ಗೇಬ್ರಿಯಲ್ ಗಾರ್ಸಿಯನ " Of love and demons " ನಲ್ಲಿ ಡುಮಿಂಗ ಎಂಬ ಪಾತ್ರ ಇರೋದು ನೋಡಿ ಇದೊಂದು ನಿಜ ಹೆಸರು ಎಂಬುದು ಖಾತ್ರಿಯಾಯ್ತು!  ಶಶಿ ತರೀಕೆರೆಯವರ ಮೊದಲ ಕಥಾ ಸಂಕಲನದ ಮೂಲ ದ್ರವ್ಯ ಮನುಷ್ಯಪ್ರೀತಿ. ಒಮ್ಮೆ ಎಸ್ ದಿವಾಕರ್ ಹೇಳಿದ್ದರು " Short stories are about the people who are submerged in the society " ಅಂತ. ಅಂದರೆ ಸಣ್ಣ ಕಥೆಗಳು ಸಮಾಜದಲ್ಲಿ ಇದ್ದು ಇರದ, ಸಾಮಾನ್ಯವಾಗಿ ಯಾರೂ ಗುರುತಿಸದ ಅಷ್ಟಾಗಿ ತಲೆಕೆಡಿಸಿಕೊಳ್ಳದವರ ಬಗ್ಗೆಯೇ ಆಗಿರುತ್ತದೆ ಮತ್ತು ಆಗಿರಬೇಕು ಕೂಡ. ಶಶಿಯವರ ಕಥೆಗಳಲ್ಲಿ ಇದು ಸರಳ ಮತ್ತು ಸ್ಪಷ್ಟವಾಗಿ ಬಂದಿದೆ.  ವಿಚಿತ್ರ ಹೆಸರಿಟ್ಟುಕೊಂಡದ್ದರಿಂದ ಅವಹೇಳನಕ್ಕೆ ಒಳಗಾಗುವ "ಡುಮಿಂಗ" ಕಥೆ ಬೆಸಗರಹಳ್ಳಿ ರಾಮಣ್ಣರ "ಗಾಂಧಿ" ಯನ್ನ ನೆನಪಿಸಿದರೆ, "ಮುಗಿಲಿನ ಕರೆ" ಕಥೆ ಖಾಸನೀಸರ " ತಬ್ಬಲಿಗಳು " ಕಥೆಯನ್ನು ನೆನಪಿಸುತ್ತದೆ. ಆದರೆ ಇವು ಆ ಕಥೆಗಳಿಗಿಂತ ಬಹಳ ಭಿನ್ನವಾಗಿದೆ ಎಂಬುದನ್ನು ಸ್ಪಷ್ಟ ಹೇಳಬೇಕು. "ಜೀನಿ " ಸಂಬಂಧಗಳ ಸಂಕೀರ್ಣತೆಯನ್ನು "ಪ್ರಣಯ ರಾಜ " ಕಥೆ ಅವುಗಳ ವ್ಯಾವಹಾರಿಕತೆಯನ್ನು, "ಜನರಲ್ ವಾರ್ಡ್ " ಅಮಾಯಕತೆಯನ್ನು, "ಜಾದೂಗಾರನ ನಿ...