Skip to main content

Posts

Showing posts from December, 2019

Naavalla !

Sethuram Sn ‘ ನಾವಲ್ಲ ‘ ಇದು ಇಂದಿನ ಮತ್ತು ಎಂದಿನ     ಸಮಸ್ಯೆ ! ಮಾಡುವುದನ್ನೆಲ್ಲಾ ಮಾಡಿ ಆಡುವುದನ್ನೆಲ್ಲಾ ಆಡಿ ಮತ್ಯಾರನ್ನೋ ದೋಷಿಸಿ ನಾವು ಪಲಾಯನಗೊಳ್ಳುವುದು ! S N ಸೇತುರಾಂ ಅದ್ಭುತ ವಾಗ್ಮಿ ಮತ್ತು ತಮ್ಮದೇ ಆದ ವಿಶೇಷ ರೆಂಡರಿಂಗ್ ಇರುವವರು. ಅವರ ಧಾರಾವಾಹಿಗಳನ್ನು ನೋಡಿರುವವರಿಗೆ ಈ ಕಥೆಗಳನ್ನು ಓದುವಾಗ ಅವರ ರೆಂಡರಿಂಗ್ ಅಥವಾ “ ಡೈಲಾಗ್ ಡೆಲಿವರಿ “ ಯ ಛಾಯೆ ಬಿಡದಿರದು ! ನಾನೂ ಈ ಎಲ್ಲಾ ಕಥೆಗಳನ್ನೂ ಹಾಗೆಯೇ ಓದಿದ್ದು ! ಹೆಣ್ಣಿನ ಬದುಕನ್ನು ಗಂಡಿನ ಕುಹಕನ್ನು ಏಕ ಕಾಲದಲ್ಲಿ ಅಭಿವ್ಯಕ್ತಿಗೊಳಿಸುವ ಇಲ್ಲಿನ          “ ಮೌನಿ, ಸ್ಮಾರಕ , ಕಾತ್ಯಾಯಿನಿ “ ಮುಂತಾದ ಕಥೆಗಳು ಓದುಗನನ್ನು ಕಂಗಾಲಾಗಿಸುತ್ತವೆ ಅಥವಾ ನಿಷ್ಟೂರವಾಗಿ ಹೇಳಬೇಕೆಂದರೆ ಬೆತ್ತಲುಗೊಳಿಸುತ್ತವೆ!  ಅದರಲ್ಲೂ ಓದುಗ ಗಂಡಾಗಿದ್ದರೆ ಕೆನ್ನೆಯ ಮೇಲೊಂದು ಬಾರಿಸುತ್ತದೆ ! ‘ ಮೋಕ್ಷ ‘ ಕಥೆಯಲ್ಲಿ ದಾರಿ ತೋರುವವನೇ ಅಥವಾ ಹಾಗೆಂದು ನಂಬಿಸಿ ಪೀಠದಲ್ಲಿ ಕೂರಿಸಿದವನೇ ತನ್ನ ಮೋಕ್ಷಕ್ಕೆ ತಿಕ್ಕಾಡಿ ಕಡೆಗದನ್ನು ಹೋರಾಟ ಮಾಡಿ ಪಡೆದುಕೊಂಡು ತನ್ನನ್ನು ನಂಬಿದವರನ್ನೆಲ್ಲ ಧಿಗ್ಬ್ರಮೆ ಗೊಳಿಸುವುದು ಅರ್ಥವತ್ತಾಗಿದೆ ! ‘ ಸಂಭವಾಮಿ’  ಕಥೆಯು ಮೂರೂ ಬಿಟ್ಟವರು ಧರೆಗೆ ದೊಡ್ಡವರು ಎಂಬುದನ್ನು ಸಾರುತ್ತಲ್ಲೇ ಮನುಷ್ಯನ ಖಿಲಾಡಿತನವನ್ನು ಬುದ್ಧಿವಂತಿಕೆಯನ್ನು ಒಂದು ಕಡೆ ಇಟ್ಟು  ಧರ್ಮ  ಕರ...

Love and loans !

Two lives truly EXTRAVAGANT !  One for LOVE and another for LOANS !

L

ಕವಿಯೊಬ್ಬನ ಸ್ವಗತ ಹೇಗಿರಬಹುದು ? ಕವಿಗಳೆಲ್ಲಾ ಭಾವ ಜೀವಿಗಳಾ ?  ಕವಿತೆ ಪ್ರತಿಭೆಯ ಕೂಸೋ ಅಥವಾ ತಲೆಬಗ್ಗಿಸಿ ಶ್ರಮ ವಹಿಸಿ ಬರೆವ ಸ್ಕಿಲ್ಲೋ ? ಕವಿಯದ್ದು ಧ್ಯಾನಸ್ಥ ಸ್ಥಿತಿಯೋ ತ್ರಿಶಂಕುನೊ ? ಕವಿ ಏನೂ ಹೇಳದೆ ಎಲ್ಲವನ್ನೂ ಹೇಳಿಬಿಟ್ಟಹಾಗೆ ಪೋಸು ಕೊಡುವ ಪಲಾಯನವಾದಿಯಾ ? ಕವಿ ಸೂಕ್ಷ್ಮ ಮನಸ್ಸಿನವನಾಗಿರುವುದರಿಂದ ಅವನಿಗೆ ವ್ಯಾಪಾರಿ  ಸೂಕ್ಷ್ಮಗಳು ತಿಳಿದು ಅದನ್ನು ಅವನು ತನ್ನನ್ನು ಎಸ್ಟಾಬಲಿಷ್ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನಾ ? L  ಕಾದಂಬರಿ ಓದಿದಾಗ ಹೀಗೆಲ್ಲಾ ಅನ್ನಿಸಿತು. ಕವಿ ನಿಜಕ್ಕೂ ಒಬ್ಬಂಟಿ ಅನ್ನುವ ಅನುಮಾನಗಳು ಗಟ್ಟಿಯಾಗ ತೊಡಗಿದವು! ಯಾಕೋ ರಾಘವೇಂದ್ರ ಖಾಸನೀಸರ “ ತಬ್ಬಲಿಗಳು “ ಕಥೆ ನೆನಪಾಗತೊಡಗಿತು “ಜಾನಕಿ ಕಾಲಂ “ ನೆನಪಾಯಿತು. ಆದಿ ಇರದ ಅಂತ್ಯವಿರದ ಅಸಂಖ್ಯ ಪ್ರಶ್ನೆಗಳು ಮೈಗೆ  ಹತ್ತಿಕೊಂಡಿತು !

ಬಂಗಾರದ ಮನುಷ್ಯರು

ತಮ್ಮ ಊರಿನ ಮೇಲಿನ ಅಗಾಧ ಪ್ರೀತಿ ಮತ್ತು ಕಾರ್ಮಿಕರ ಮೇಲಿನ ಕಾಳಜಿ ಇರದೇ ಇಂತಹ ಪುಸ್ತಕವನ್ನು ಖಂಡಿತಾ ಬರೆಯಲಾಗುತ್ತಿರಲಿಲ್ಲ. ಹಲವು ಕಡೆ R K ಯವರ ಬರವಣಿಗೆ ಧಮನಿತರ ಕಾವ್ಯದಂತೆ ಅನ್ನಿಸುತ್ತದೆ. ಅಲ್ಲಿ ನೋವು ಬೆವರು ಕಣ್ಣೀರು ಮತ್ತು ನೆತ್ತರುಗಳೇ ರೂಪಕವಾಗಿವೆ ! ಅವರು ಈ ಪುಸ್ತಕ ಬರೆಯದೇ ಹೋಗಿದ್ದರೆ KGF ಗೆ ಮಹಾತ್ಮ ಗಾಂಧಿ ಬಂದದ್ದು ಮತ್ತು ಕಾರ್ಮಿಕರ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಿದ್ದು , ಅಂಬೇಡ್ಕರ್ರವರು ಬಂದು ಗಣಿ ಕೆಲಸಗಾರರ ಕೂಲಿ ಹೆಚ್ಚಳ ಹೋರಾಟದಲ್ಲಿ ಭಾಗವಹಿಸಿ ಅವರನ್ನು ಹುರಿದುಂಬಿಸಿದ್ದು ನಮಗೆ ಹೇಗೆ ತಿಳಿಯಬೇಕಿತ್ತು ? ತಿಂಗಳಿಗೆ ನೂರು ರೂಪಾಯಿ ಹೆಚ್ಚು ಸಂಬಳಕ್ಕೆ ಗಣಿಯಾಳಕ್ಕೆ ಇಳಿವ ಸಾಹಸಮಾಡುವ ಕಾರ್ಮಿಕನ ಮನಸ್ಸು ಮತ್ತು ಪರಿಸ್ಥಿತಿ ಹೇಗಿರಬಹುದು ? ಇನ್ನು ನೂರು ವರ್ಷಗಳ ಕಾಲ ಕೋಲಾರದ ಗಣಿಯಲ್ಲಿ ಸಮೃದ್ಧವಾಗಿ ಗಣಿಗಾರಿಕೆ ಮಾಡಬಹುದು ಎನ್ನುವ ಎಲ್ಲ ವರದಿಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಮತ್ತು KGF  ನ ಅಷ್ಟೂ ಜಾಗವನ್ನು ಪರಭಾರೆ ಮಾಡಲು ಹೊರಡುವುದು, ಇವೆಲ್ಲ ನೋಡಿದಾಗ ಇದೆಲ್ಲ ಒಂದು ಸಂಕೀರ್ಣ ವಿಷ ಕೂಪದಂತೆ ಕಾಣುತ್ತದೆ !

Samara bhairavi

ಕೆಲವೊಮ್ಮೆ  ಮುನ್ನುಡಿ ಎಷ್ಟೊಂದು ಮಾತುಗಳನ್ನು ಹೇಳಿಬಿಡುತ್ತದೆ. ಈ ಪುಸ್ತಕ ಬರೆದ ಸಂತೋಷ್ ತಮಯ್ಯ ರವರ ಚಿತ್ರ ಎಲ್ಲೂ  ಕಾಣಿಸಲಿಲ್ಲ ! ಕಾರಣ ಸ್ಪಷ್ಟ ಅವರ ಗುರಿ ಸೇನಾನಿಗಳ ಕಥೆ ಹೇಳುವುದು, ತಮ್ಮ ಜಾಗಟೆ ಬಡಿವುದಲ್ಲ !